ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರಿಂದ ರಾಜಿನಾಮೆ ಪಡೆಯಬೇಕೆಂದು ಎನ್.ಸಿ.ಪಿ ನಾಯಕಿ ಸುಪ್ರಿಯಾ ಸುಳೆ ಒತ್ತಾಯಿಸಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಲ್ಲದೆ ಬೇರೆ ಮುಖ್ಯಮಂತ್ರಿಯಾಗಿದ್ದರೆ ಕೇಂದ್ರವು ಈಗಾಗಲೇ ರಾಜಿನಾಮೆ ಪಡೆಯುತ್ತಿತ್ತು ಎಂದು ಆರೋಪಿಸಿದ್ದಾರೆ.
ಮಣಿಪುರದಲ್ಲಿ ಮೂರು ತಿಂಗಳ ಕಾಲ ನಡೆದ ಸಂಘರ್ಷದಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೂ ಮೋದಿ ಸರ್ಕಾರವು ಮುಖ್ಯಮಂತ್ರಿಗಳನ್ನು ಮಗುವಿನಂತೆ ರಕ್ಷಿಸುತ್ತಿದೆ ಎಂದು ಟೀಕಿಸಿದ್ದಾರೆ.
ಮಣಿಪುರದಲ್ಲಿ ಇದುವರೆಗೆ 179 ಜನರು ಮೃತಪಟ್ಟಿದ್ದಾರೆ. 60 ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ. 3 ಸಾವಿರಕ್ಕೂ ಹೆಚ್ಚು ಮನೆಗಳು ಸುಟ್ಟುಹೋಗಿವೆ. ಮತ್ತು 40 ಸಾವಿರ ಜನರು ಇನ್ನೂ ಪರಿಹಾರ ಶಿಬಿರಗಳಲ್ಲಿದ್ದಾರೆ. ದಂಗೆ, ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳು 10 ಸಾವಿರ ಮೀರಿದೆ ಎಂದು ಅವಿಶ್ವಾಸ ನಿರ್ಣಯದ ಮೇಲೆ ಸಂಸತ್ತಿನಲ್ಲಿ ಅವರು ಮಾತನಾಡಿದರು.
ಅವಿಶ್ವಾಸ ನಿರ್ಣಯವನ್ನು ಮಂಡಿಸಿದ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಅವರು ಸಂಸತ್ತಿನಲ್ಲಿ ಮಣಿಉರ ಹಿಂಸಾಚಾರದ ವಿಷಯವನ್ನು ಪ್ರಸ್ತಾಪಿಸಲು ಮೋದಿ ಅವರು ದೃಢವಾಗಿ ನಿರಾಕರಿಸಿದ್ದಾರೆ ಎಂದು ಆರೋಪಿಸಿದರು.
ಅವಿಶ್ವಾಸ ನಿರ್ಣಯವನ್ನು ಮಂಡಿಸಿದ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಅವರು, ಸಂಸತ್ತಿನಲ್ಲಿ ಮಣಿಪುರ ಹಿಂಸಾಚಾರದ ವಿಷಯವನ್ನು ಪ್ರಸ್ತಾಪಿಸಲು ಮೋದಿ ಅವರು ದೃಢವಾಗಿ ನಿರಾಕರಿಸಿದ್ದಾರೆ ಎಂದು ಆರೋಪಿಸಿದರು.
ದೇಶದ ಆರ್ಥಿಕತೆಯು ವಿಪರೀತ ಹಣದುಬ್ಬರಕ್ಕೆ ಸಾಕ್ಷಿಯಾಗುತ್ತಿದೆ. ಸಹಕಾರಿ ಒಕ್ಕೂಟ ದುರ್ಬಲಗೊಳ್ಳುತ್ತಿದೆ ಮತ್ತು ರೈತ ವಿರೋಧಿ ಧೋರಣೆ ಹೆಚ್ಚಾಗಿದೆ. ಆರೋಗ್ಯ, ಹಸಿವು, ಮಾನವ ಸ್ವಾತಂತ್ರ್ಯ, ವಿಶ್ವ ಸಂತೋಷ, ಪರಿಸರ ಸಂರಕ್ಷಣೆ, ಲಿಂಗ ಸಮಾನತೆ ಮತ್ತು ಪ್ರಜಾ ಪ್ರಭುತ್ವವು ಕುಸಿದಿದೆ. ಇದನ್ನು ಅಭಿವೃದ್ಧಿ ಎಂದು ಹೇಗೆ ಕರೆಯುತ್ತೀರಿ? ಹೀಗಾಗಿ ಈ ಸರ್ಕಾರದ ಮೇಲೆ ನಮಗೆ ವಿಶ್ವಾಸ ಇಲ್ಲ ಎಂದು ಟೀಕಿಸಿದರು.
ನಾನು ನಿಮಗೆ ಶಾಂತಿಯನ್ನು ನೀಡುತ್ತೇನೆ. ನಾನು ನಿಮಗೆ ಪ್ರೀತಿಯನ್ನು ಅರ್ಪಿಸುತ್ತೇನೆ. ನಾನು ನಿಮಗೆ ಸ್ನೇಹವನ್ನು ನೀಡುತ್ತೇನೆ. ನಾನು ನಿನ್ನ ಸೌಂದರ್ಯವನ್ನು ನೋಡುತ್ತೇನೆ. ನಿಮ್ಮ ಅಗತ್ಯವನ್ನು ನಾನು ಕೇಳುತ್ತೇನೆ. ನಾನು ನಿಮ್ಮ ಭಾವನೆಗಳನ್ನು ಅನುಭವಿಸುತ್ತೇನೆ. ನನ್ನನ ಬುದ್ದಿವಂತಿಕೆಯು ಅತ್ಯುನ್ನತ ಮೂಲದಿಂದ ಹರಿಯುತ್ತದೆ. ನಿಮ್ಮಲ್ಲಿರುವ ಆ ಮೂಲವನ್ನು ನಾನು ವಂದಿಸುತ್ತೇನೆ. ಒಗ್ಗಟ್ಟು ಮತ್ತು ಪ್ರೀತಿಗಾಗಿ ನಾವು ಒಟ್ಟಾಗಿ ಕೆಲಸ ಮಾಡೋಣ ಎಂದು ಮಹಾತ್ಮ ಗಾಂಧಿಯವರ ಮಾತುಗಳನ್ನು ಉಲ್ಲೇಖಿಸಿ ಸುಪ್ರಿಯಾ ಹೇಳಿದ್ದಾರೆ.


