Monday, March 16, 2026
Google search engine
Homeಜಿಲ್ಲೆಮಧುಗಿರಿ ಸಮೀಪ ಬಸ್ ಅಪಘಾತ - 1 ಸಾವು, 25 ಜನರಿಗೆ ಗಂಭೀರ ಗಾಯ

ಮಧುಗಿರಿ ಸಮೀಪ ಬಸ್ ಅಪಘಾತ – 1 ಸಾವು, 25 ಜನರಿಗೆ ಗಂಭೀರ ಗಾಯ

ತುಮಕೂರು-ಪಾವಗಡ ರಾಜ್ಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ರಸ್ತೆ ಅಪಘಾತ ಸಂಭವಿಸಿದ್ದು ಓರ್ವ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಐವರು ಮೃತಪಟ್ಟಿದ್ದಾರೆಂಬ ಮಾಹಿತಿ ಸ್ಥಳೀಯರ ನಡುವೆ ಹರಿದಾಡುತ್ತಿದೆ.

ಕೆ.ಎ.25 ಡಿ.1847 ನಂಬರಿನ ಬಸ್ ಮಧುಗಿರಿ ಕಡೆಯಿಂದ ಪಾವಗಡಕ್ಕೆ ತೆರಳುತ್ತಿದ್ದಾಗ ಜಡೇಗೊಂಡನಹಳ್ಳಿ ಸಮೀಪ ಅಪಘಾತವಾಗಿದೆ. ಎಡಬದಿಯಿಂದ ಬಲಬದಿ ರಸ್ತೆಗೆ ಹೋಗಿ ರಸ್ತೆಯಿಂದ 200 ಮೀಟರ್ ದೂರಕ್ಕೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬಸ್ ಅಪಘಾತದಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular