ಪರಿಶಿಷ್ಟ ಪಂಗಡಕ್ಕೆ ಸಿಕ್ಕಿರುವ ಮೀಸಲಾತಿಯನ್ನು ನಕಲಿ ಜಾತಿ ಸರ್ಟಿಪಿಕೇಟ್ಗಳ ಮೂಲಕ ಕಸಿಯುವ ಪ್ರಯತ್ನ ನಡೆಯುತ್ತಿದ್ದು, ಇದರ ವಿರುದ್ದ ನಾಯಕ ಸಮುದಾಯದ ಎಲ್ಲಾ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು, ಕಾನೂನು ರೂಪಿಸುವ ಅಗತ್ಯವಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನ ಗಾಜಿನಮನೆಯಲ್ಲಿ ಹಮ್ಮಿಕೊಂಡಿದ್ದ ನಾಯಕ ಸಮುದಾಯದ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭದಲ್ಲಿ
ಭಾಗಿಯಾಗಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಚಂದ್ರಶೇಖರ ಪ್ರಧಾನಿಯಾಗಿದ್ದ ಕಾಲದಲ್ಲಿ ನಮ್ಮ ಸಮಾಜದ ಸಚಿವರಾದ ಸಿ.ವೀರಣ್ಣ, ಉಗ್ರಪ್ಪ, ೆಚ್.ಡಿ.ದೇವೇಗೌಡ ಸೇರಿದಂತೆ ಹಲವರು ಒತ್ತಡ ಹಾಕಿ ವಿವಿಧ ಹೆಸರುಗಳಿಂದ ಕೆರೆಯತ್ತಿದ್ದ ನಾಯಕ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರುವಂತೆ ಮಾಡಿದರು.

ಆದರೆ ಇಂದು ನಕಲಿ ಜಾತಿ ಪ್ರಮಾಣ ಪತ್ರಗಳ ಮೂಲಕ ನಮ್ಮ ಉದ್ಯೋಗ, ಶಿಕ್ಷಣದ ಸವಲತ್ತುಗಳನ್ನು ಕಸಿಯುವ ಪ್ರಯತ್ನ ನಡೆದಿದೆ. ಇದರ ವಿರುದ್ದ ಜೂನ್ 3ರಿಂದ ನಡೆಯುವ ಅಧಿವೇಶನದ ವೇಳೆ ನಾವೆಲ್ಲರೂ ಒಗ್ಗೂಡಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಇದನ್ನು ತಡೆಯುವ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದ್ದಾರೆ.
ಅಹಿಂದ ಸಮುದಾಯಗಳು ಒಗ್ಗೂಡಿದರೆ ಮಾತ್ರ ರಾಜಕೀಯ ಪ್ರಾತಿನಿಧ್ಯಗಳಿಸಲು ಸಾಧ್ಯ. ಅಹಿಂದ ವರ್ಗಕ್ಕೆ ಸೇರಿದ ಕೆಲವರು ವಯುಕ್ತಿಕ ವರ್ಚಸ್ಸನಿಂದ ಗೆಲ್ಲಬಹುದು. ಆದರೆ ಸಮುದಾಯದ ಗೆಲ್ಲಬೇಕಾದರೆ ನಾವೆಲ್ಲರೂ ಒಗ್ಗೂಡ ಬೇಕಾಗಿದೆ ಎಂದರು.
ಕಷ್ಟದಲ್ಲಿ ಬೆಳೆದವರಿಗೆ ಸಾಧಿಸುವ ಚಲವಿರುತ್ತದೆ. ಅದಕ್ಕೆ ಉದಾಹರಣೆ ಜಗಳೂರು ಶಾಸಕ ದೇವೇಂದ್ರಪ್ಪ. ಶಾಲೆಯ ಜವಾನನಾಗಿದ್ದವರು ತಮ್ಮ ಒಳ್ಳೆಯ ಕೆಲಸಗಳ ಮೂಲಕ ಇಂದು ಶಾಸಕರಾಗಿದ್ದಾರೆ. ಅಧಿಕಾರ ಎಂಬುದು ವಿಷವಿದ್ದಂತೆ. ಅಧಿಕಾರ ಸದ್ಬಳಕೆ ಮಾಡಿದಾಗ ಮಾತ್ರ ಜನರ ಪ್ರೀತಿ, ಯಶಸ್ಸು ದೊರೆಯುತ್ತದೆ ಎಂದು ತಿಳಿಸಿದರು.
ಇಂದು ನಾವೆಲ್ಲರೂ ರಾಜಕೀಯವಾಗಿ ಅಧಿಕಾರ ಪಡೆದಿದ್ದರೆ ಅದಕ್ಕೆ ಅಂಬೇಡ್ಕರ್ ನೀಡಿದ ಮೀಸಲಾತಿಯ ಕೊಡುಗೆ ಕಾರಣ. ಹಾಗಾಗಿ ನಾವ್ಯಾರು ಅವರನ್ನು ಮರೆಯುವಂತಿಲ್ಲ. ಇಂದು ಮಾತನಾಡಿರುವ ಎಲ್ಲಾ ಶಾಸಕರು, ಸಚಿವರು ಸಹ ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಮುಂದೆಯೂ ನೆನಪು ಮಾಡಿಕೊಳ್ಳಬೇಕಿದೆ ಎಂದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಮುದಾಯದ ಆಶಯದಂತೆ ಈ ಹಿಂದಿನ ಸರ್ಕಾರ ಆದೇಶ ಮಾಡಿದ್ದ ಮೀಸಲಾತಿ ಹೆಚ್ಚಳವನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಲಿದ್ದೇವೆ ಎಂದರು.
ಮೀಸಲಾತಿ ಹೆಚ್ಚಳಕ್ಕಾಗಿ ನಮ್ಮ ಸಮಾಜದ ಸ್ವಾಮೀಜಿಗಳು ಸತ್ಯಾಗ್ರಹ ಕೈಗೊಂಡಾಗ ಕೆಲವರು ರಕ್ತದಲ್ಲಿ ಬರೆದುಕೊಡುವ ನಾಟಕ ಮಾಡಿದರು. ಅವರ ನಾಟಕ ಏನೆಂಬುದು ಜನತೆಗೆ ಗೊತ್ತಾಗಿ, ಸರಿಯಾದ ಪಾಠ ಕಲಿಸಿದ್ದಾರೆ. ಸಮುದಾಯದ ಹೆಸರಿನಲ್ಲಿ ತಮ್ಮ ಬೆಳೆ ಬೆಯಿಸಿಕೊಳ್ಳಲು ಹೊರಟರೆ, ಜನ ಬೆಂಬಲಿಸುವುದಿಲ್ಲ ಎಂಬುದು ಸ್ಪಷವಾಗಿದೆ. ಎಲ್ಲಾ ಸಚಿವರು ಸೇರಿದ ಸಮಾಜದ ಒಳಿತಿಗಾಗಿ ದುಡಿಯಲಿದ್ದೇವೆ ಎಂದು ಭರವಸೆ ನೀಡಿದರು.


