ನಮ್ಮೂರಿನ ಸುತ್ತಮುತ್ತ ಹಳ್ಳಿಗಳಿಗೆ ಸರ್ಕಾರಿ ಬಸ್ ಬರಲ್ಲ ,ಖಾಸಗಿ ಬಸ್ಸು ಬರಲ್ಲ ಸ್ವಾಮಿ ಎಲ್ಲಿಗೆ ಹೋಗೋದು ಇದ್ರು ಗಾಡಿಗಳಲ್ಲೇ ಹೋಗಬೇಕು.ನಮ್ಮಂತ ಉರಿನೋರಿಗೆ ಪ್ರೀ ಬಸ್ ಹೆಂಗೆ ಸಿಗುತ್ತೆ ಸ್ವಾಮಿ.
ಹೀಗೆಂದು ಪ್ರಶ್ನಿಸುತ್ತಾರೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದವಡಬೆಟ್ಟ ಗ್ರಾಮದ ಸಾಮಾನ್ಯ ಜನರು ಮತ್ತು ಸುತ್ತ ಮುತ್ತ ಇರುವ ಹಳ್ಳಿಯ ಸಾರ್ವಜನಿಕರು.
ನಮ್ಮೂರಿಗೆ ಸರ್ಕಾರಿ ಬಸ್ಸು , ಖಾಸಗಿ ಬಸ್ಸು ಯಾವುದು ಬರುವುದಿಲ್ಲ ಎಲ್ಲದಕ್ಕೂ ಮೋಟಾರ್ ಸೈಕಲ್ ಗಳನ್ನೇ ಅವಲಂಬಿಸಿದ್ದಾರೆ. ಸರ್ಕಾರ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದು ಒಳ್ಳೆಯದು.ಆದರೆ ಗ್ರಾಮಗಳಿಗೆ ಬಸ್ಸ್ ಬಾರದ ನಮ್ಮ ಸುತ್ತ ಮುತ್ತ ಇರುವ ಗ್ರಾಮದ ಮಹಿಳೆಯರ ಗತಿಯೇನು ?
ಸರ್ಕಾರಿ ಬಸ್ ಸೇವೆ ಕಾಣದ ಹಲವು ಗ್ರಾಮದ ಮಹಿಳೆಯರ ಅಭಿಪ್ರಾಯ ಇದೇ ರೀತಿಯದ್ದಾಗಿದೆ.
ನಮ್ಮ ಸುತ್ತಲಿನ ಗ್ರಾಮಗಳು ಇಲ್ಲಿಯವರೆಗೂ ಸರ್ಕಾರಿ ಬಸ್ ಕಂಡಿಲ್ಲ.ತಾಲ್ಲೂಕಿನ ದವಡಬೆಟ್ಟ,ದವಡಬೆಟ್ಟ ತಾಂಡ, ಕೊಣನಕುರಿಕೆ,ಗುಜ್ಜನೋಡು, ಕೆ ಟಿ ಹಳ್ಳಿ ಮಾರ್ಗದಲ್ಲಿ ಖಾಸಗಿ ಬಸ್ಸು ಬರುತಿತ್ತು ಕಳೆದ ವರ್ಷ ಅತ್ಯುತ್ತಮ ಮಳೆ ಬಂದು ನಮ್ಮೂರ ರಸ್ತೆ ಇಲ್ಲದಂತಾಗಿದೆ ಆದುದ್ದರಿಂದ ಈ ಅಕ್ಕ ಪಕ್ಕ ಗ್ರಾಮಸ್ಥರ ಗೋಳು ಕೇಳುವವರೇ ಇಲ್ಲದಂತಾಗಿದೆ.ಸರ್ಕಾರ ಮಾತ್ರ ಮಹಿಳೆಯರಿಗೆ ಬಸ್ ಸೇವೆ ಉಚಿತ ಎಂದು ಹೇಳಿದೆ.ಆದರೆ ನಮ್ಮ ಗ್ರಾಮಗಳಿಗೆ ಹೋಗಲು ರಸ್ತೆಯೇ ಇಲ್ಲ ಅಂತದರಲ್ಲಿ ಬಸ್ಸು ಹೇಗೆ ಬರುತ್ತದೆ ಇನ್ನಾದರೂ ಸಂಬಂಧಪಟ್ಟವರು ರಸ್ತೆ ಮಾರ್ಗ ಸರಿ ಪಡಿಸಿ ಈ ಹಳ್ಳಿಗೆ ಬಸ್ಸು ಬರುವ ರೀತಿಯಲ್ಲಿ ನೋಡಬೇಕಾಗುತ್ತದೆ.ಬಸ್ಸು ಬಂದರೆ ಸರ್ಕಾರ ಗೋಷಣೆ ಮಾಡಿದ ಮಹಿಳೆಯರಿಗೆ ಉಚಿತ ಸೇವೆ ಸಿಗುತ್ತದೆ.
ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸರ್ಕಾರಿ ಬಸ್ಸುಗಳು ಸಂಚಾರ ಆರಂಭ ವಾಗಬೇಕು . ಮಹಿಳಾ ಉದ್ಯೋಗಿಗಳು,ಕಾರ್ಮಿಕರು ಕೆಲಸಕ್ಕೆ ಹೋಗುವ ಮರಳುವ ಸಮಯಕ್ಕೆ ಬಸ್ಸು ದೊರೆಯಬೇಕು.ಬಸ್ಸಿನ ಸೌಲಭ್ಯ ಕಲ್ಪಿಸಿದರೆ ಆಗ ಸರ್ಕಾರದ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂಬುದು ನಮ್ಮ ಸುತ್ತ ಮುತ್ತಲಿನ ಮಹಿಳೆಯರ ಅಭಿಪ್ರಾಯ .
ದವಡಬೆಟ್ಟ ವಿಜಯ ನಾಯ್ಕ, ಪತ್ರಕರ್ತ.


