ಜನ ಕಲ್ಯಾಣ ಯೋಜನೆಗಳನ್ನು ಮೋದಿ ಸರ್ಕಾರ ಮಾಡಿದೆ. ಅದನ್ನು ಬೊಮ್ಮಾಯಿ ಸರ್ಕಾರ ಅನುಷ್ಠಾನಗೊಳಿಸಿದೆ ನಮ್ಮ ಡಬಲ್ ಇಂಜಿನ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕಡಿಮೆ ಅವಧಿಯಲ್ಲಿ ಮಾಡಿರುವುದೇ ನಮಗೆ ಹೆಮ್ಮೆಯ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರ ಮಾಡಿದ್ದು ಕೇವಲ ಮೂರು ವರ್ಷಗಳ ಕಾಲ ಅದರಲ್ಲೂ ಕೋವಿಡ್ ಹಾಗೂ ಇನ್ನು ಕ್ಲಿಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ ಹಾಗಾಗಿ ನಾವು ಕಮ್ಮಿ ಸಮಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದಾಗಿ ಹೇಳಿದರು.
ನಾವು ಜನ ಸಾಮಾನ್ಯರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ನಾವು ಅನ್ನ ಅಕ್ಷರ ಆದಾಯ ಆಶ್ರಯ ಸೇರಿದಂತೆ ಹಲವಾರು ಸಾಮಾಜಿಕ ಬದ್ಧತೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ಅದರೊಂದಿಗೆ ಹಬ್ಬದ ಸಮಯದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಕಾರ್ಯವನ್ನು ಮಾಡಲಿದ್ದೇವೆ ಎಂದರು.
ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಅದರಲ್ಲೂ ಪಂಚಾಯತ್ ವಾರು ಹಕ್ಕುಪತ್ರ ವಿತತರಣೆಯನ್ನು ವಸತಿ ರಹಿತರಿಗೆ ನೀಡಲು ಮುಂದಾಗಿದ್ದೇವೆ. ವಿದ್ಯುತ್ ಚಾಲಿತ ವಾಹನಗಳ ಸ್ಟಾರ್ಟ್ ಅಪ್ ಗಳಿಗೆ ಹೆಚ್ಚಿನ ಆದ್ಯತೆ ನೀಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಕರ್ನಾಟಕ ವಿಕಾಸವೇ ಭಾರತದ ವಿಕಾಸ ಎಂಬ ಶೀರ್ಷಿಕೆಯಡಿ ಪ್ರಣಾಳಿಕೆ ಬಿಡುಗಡೆಗೋಳಿಸಿದ್ದೇವೆ. ಕಾಂಗ್ರೆಸ್ ಬಹಳಷ್ಟು ಚಂಚಲತೆಗೆ ಒಳಗಾಗಿದೆ ಅವರಿಗೆ ಅವರ ಗ್ಯಾರಂಟಿ ಸಾಕಾರ ಆಗುವುದೇ ಅವರಿಗೆ ಗ್ಯಾರಂಟಿ ಇಲ್ಲ ಎಂದು ಲೇವಡಿ ಮಾಡಿದರು.
ಮಿಸಾಲಾತಿ ವಿಚಾರ ಕೋರ್ಟಿನಲ್ಲಿದೆ. ಯಾವುದೇ ರೀತಿಯಾದ ಸ್ಟೇ ಕೊಟ್ಟಿಲ್ಲ. ಆದರೆ ಅದರ ವಿಚಾರಣೆ ನಡೆಯುತ್ತಿದೆ. ಆ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಉತ್ತರಿಸಿದರು.