ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಬಹಳ ಮಹತ್ವದ ಚುನಾವಣೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಇದು ಮಹತ್ವದ ಚುನಾವಣೆ. ಒಂದುವೇಳೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯದೇ ಹೋದರೆ ನಮಗೆ ಯಾರಿಗೂ ವೋಟಿನ ಅಧಿಕಾರ ನಮಗೆ ಇರೋದಿಲ್ಲ. ಅಂಬೇಡ್ಕರ್ ಬರೆದ ಸಂವಿಧಾನವನ್ನು ನಾವು ರಕ್ಷಣೆ ಮಾಡದೇ ಹೋದರೆ ಯಾರಿಗೂ ಮತದಾನವನ್ನು ಮಾಡುವ ಅಧಿಕಾರ ಇರೋದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ
ಮಂಡ್ಯ ಜಿಲ್ಲೆ ಮಳವಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಯುವಕರು, ಮುದುಕರು, ಹೆಣ್ಣು -ಗಂಡು ಎಲ್ಲ ವಯಸ್ಕರಿಗೂ ವೋಟಿನ ಅಧಿಕಾರವಿದೆ. ಒಂದು ವೇಳೆ ಅಂಬೇಡ್ಕರ್, ನೆಹರೂ ಅವರು ಮತದಾನದ ಹಕ್ಕನ್ನು ಕೊಡದೇ ಇರುತ್ತಿದ್ದರೆ ಇಂದು ಯಾರೂ ನಿಮ್ಮ ಮನೆಬಾಗಿಲಿಗೆ ಮತಯಾಚನೆಗೆ ಬರುತ್ತ ಇರಲಿಲ್ಲ. ಹಾಗಾಗಿ ನಮಗೆ ಇಂದು ಮತದಾನವನ್ನು ಮಾಡುವ ಅವಕಾಶ ಕಲ್ಲಿಸಿದ್ದು ಅಂಬೇಡ್ಕರ್ ಮತ್ತು ನೆಹರೂ ಅವರು ಎಂದರು.
ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅನೇಕ ಬಡವರ ಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ, ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ ಸೇರಿದಂತೆ ಅನೇಕ ಗರೀಬಿ ಹಟವೋ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಆದರೆ ಈಗಿನ ಬಿಜೆಪಿ ಸರ್ಕಾರ ಮಾತ್ರ ಸಂವಿಧಾನವನ್ನು ತಿರುಚಬೇಕು ಮತ್ತು ಪ್ರಜಾಪ್ರಭುತ್ವವನ್ನು ಅಲುಗಾಡಿಸಬೇಕು ಎಂಬ ಪ್ರಯತ್ನ ನಡೆಸುತ್ತಲೇ ಇದೆ. ಆದ್ದರಿಂದ ಕರ್ನಾಟಕದ ಚುನಾವಣೆ ಬಹಳ ಮಹತ್ವದ ಚುನಾವಣೆ. ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಜಯಬೇರಿ ಗಳಿಸಿದರೆ ಇಡೀ ದೇಶದಲ್ಲಿ ಜಾಗೃತರಾಗುತ್ತಾರೆ ಎಂದು ಹೇಳಿದರು.
ನೀವು ಸತ್ಯವಾಗಿ ಮಾತನಾಡಿದರೆ ಬಿಜೆಪಿ ಸರ್ಕಾರ ಜೈಲಿಗೆ ಕಳಿಸುತ್ತಾರೆ. ಅನೇಕ ಜನ ಪ್ರಗತಿಪರ ವಿಚಾರಧಾರೆಗೆ ಬೆಂಬಲಕೊಟ್ಟರೆ ಅವರಿಗೆ ಈಡೀ, ಐಟಿ ಅಂತ ಬೆದರಿಸುವ ಮುಖೇನ ಅವರನ್ನು ಹತ್ತಿಕುವ ಕೆಲಸ ಈ ಸರ್ಕಾರ ಮಾಡುತ್ತಲೇ ಇದೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಸತ್ಯ ಹೇಳಿದ್ರೆ ಅವರ ಭಾಷಣವನ್ನು ತೆಗೆದ್ರು ರಾಜ್ಯಸಭೆ ಮಾತನಾಡಿದ ನನ್ನ ಭಾಷಣವನ್ನು ತೆಗೆದ್ರು. ನಮ್ಮನ್ನು ಬಾಯಿ ಮುಚ್ಚಿಸಲು ರಾಹುಲ್ ಗಾಂಧೀ ಅವರ ಸದಸ್ಯತ್ವವನ್ನೇ ತೆಗೆದ್ರು. ಮೋದಿಯ ಗೆಳೆಯ, ಗುಜರಾತ್ತಿನ ಸಂಸದ ನಾರಯಣ ಭಾಯ್ ಕಚಾಡಿಯಾ ಅವರು ದಲಿತ ವೈದ್ಯನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಅವರಿಗೆ 3 ವರ್ಷ 10 ತಿಂಗಳು ಶಿಕ್ಷೆಯಾಯಿತು. ಅವರನ್ನು ಅನರ್ಹಗೊಳಿಸಲಿಲ್ಲ. ಮತ್ತೇ 2019 ರಲ್ಲಿ ಚುನಾವಣೆಗೆ ನಿಂತು ಗೆದ್ದಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರಿಗೆ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿಕ್ಷೆ ಆದಾಗ ಅವರನ್ನು ಒಂದೇ ದಿನದಲ್ಲಿ ಅನರ್ಹ ಮಾಡಿದರು. ಮನೆ ಖಾಲಿ ಮಾಡಿಸಿದರು.
ಕರ್ನಾಟಕ ಮತ್ತು ಆಂಧ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ದಲಿತರಿಗೆ ಜನಸಂಖ್ಯೆ ಆಧಾರದ ಮೇಲೆ ವಿಶೇಷ ಅನುದಾನವನ್ನು ಕೊಟ್ಟಿದ್ದೇವೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಎಸ್ ಈಪಿ ಅನುದಾವನ್ನು ಕೊಟ್ಟರು, ಬೇರೆ ಯಾವ ರಾಜ್ಯದಲ್ಲಿ ಈ ರೀತಿಯ ಅನುದಾನವನ್ನು ಕೊಟ್ಟಿಲ್ಲ.
5 ಗ್ಯಾರಂಟಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿ ಹಾಗೆಯೇ ಕಾಂಗ್ರೆಸ್ ಪಕ್ಷ ಇದೀಗ ಐದನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ ಅದರಲ್ಲಿ ಸಾರ್ವಜನಿಕ ಬಸ್ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುತ್ತೇವೆ. ಸೋನಿಯಾ ಗಾಂಧಿಯ ನೇತೃತ್ವದಲ್ಲಿ ಯುಪಿಎ ಸರ್ಕಾರ ಮನರೇಗಾ ಕಾರ್ಯಕ್ರಮ ಮಾಡಿದ್ದೇವೆ. ನಾವು ಎನ್ನೆಲ್ಲಾ ವಾಗ್ದಾನ ಮಾಡಿದ್ದೇವೆ ಅದು ಅಧಿಕಾರದಲ್ಲಿರುವಾಗ ಕೇಂದ್ರ ಮತ್ತು ರಾಜ್ಯದಲ್ಲೂ ನಾವು ನುಡಿದಂತೆ ನಡೆದಿದ್ದೇವೆ. ನಾವು ಘೋಷಣೆ ಮಾಡಿರುವ 5 ಗ್ಯಾರಂಟಿ ಕಾರ್ಯಕ್ರಮಗಳು ಅದು ಗ್ಯಾರಂಟಿಯೇ ಎಂಬ ಭರವಸೆ ವ್ಯಕ್ತಪಡಿಸುತ್ತೇನೆ. ಅದು ಬೋಗಸ್ ಅಲ್ಲ, ಸುಳ್ಳು ಹೇಳೊದು ಬಿಜೆಪಿ ಅವರಿಗೆ ಅಭ್ಯಾಸವಾಗಿ ಬಿಟ್ಟಿದ್ದೇವೆ. ನಾವು ಯಾವತ್ತೂ ಬಡವರು ಮತ್ತು ಕಾರ್ಮಿಕರ ಪರ. ನಾವು ಬಡವರ ಕೃಷಿಕರ ಪರ ಪ್ರಗತಿಪರ ಕಾರ್ಯಕ್ರಮದ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ನೀಡಿ ಅನುಷ್ಠಾನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.


