ಖಾಸಗಿ ಬಸ್ ವೊಂದು ರಸ್ತೆಯ ಡಿವೈಡರ್ ಗೆ ಗುದ್ದಿ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐವರು ಮೃತಪಟ್ಟಿರುವ ಘಟನೆ ತುಮಕೂರು ಸಮೀಪದ ಹಿರೇಹಳ್ಳಿ ಸಮೀಪ ಸಂಭವಿಸಿದೆ.
ತುಮಕೂರು ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರಿಗೆ ಬೆಂಗಳೂರು ಕಡೆಯಿಂದ ಬಂದ ಬಸ್ ರಸ್ತೆಯ ಡಿವೈಡರ್ ಗೆ ಗುದ್ದಿ ಇನ್ನೋವ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗೋವಿಂದ ನಾಯ್ಕ, ಪತ್ನಿ ತಿಪ್ಪಮ್ಮ, ದಿನೇಶ್, ವಾಹನ ಚಾಲಕ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕನನ್ನು ಹೊರತುಪಡಿಸಿ ಮೃತರೆಲ್ಲರೂ ಚಳ್ಳಕೆರೆ ತಾಲ್ಲೂಕಿನವರು ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಭಾಗ್ಯಮ್ಮ, ಕರಿಯಮ್ಮ, ಪುಟ್ಟಮ್ಮ, ಮಂಜುಳಾ, ಶ್ರೀಕಂಡಪ್ಪ, ಮಂಜುನಾಥ್ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.