Wednesday, March 18, 2026
Google search engine
Homeಮುಖಪುಟರಾಜಕೀಯ ದುರುದ್ದೇಶದಿಂದ ಒಳ ಮೀಸಲಾತಿ - ಸಿದ್ದರಾಮಯ್ಯ ಟೀಕೆ

ರಾಜಕೀಯ ದುರುದ್ದೇಶದಿಂದ ಒಳ ಮೀಸಲಾತಿ – ಸಿದ್ದರಾಮಯ್ಯ ಟೀಕೆ

ಒಳ ಮೀಸಲಾತಿ ವಿಚಾರಕ್ಕೆ ನಮ್ಮ ಬದ್ಧತೆ ಇದೆ, ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳ ಮೀಸಲಾತಿ ಮಾಡಿ ಎಂದು ಸಲಹೆ ಕೊಟ್ಟಿದ್ದೆವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸದಾಶಿವ ಆಯೋಗ ವರದಿ ಕೊರಚ, ಬೋವಿ, ಲಂಬಾಣಿ, ಕೊರಮ ಸಮುದಾಯಕ್ಕೆ ಇರೋದು, ಅದನ್ನು ಮಾಡುವಾಗ ಬಂಜಾರ ಸಮುದಾಯ ವಿರೋಧ ಮಾಡುತ್ತಿದ್ದರು. ಇವರೆನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಹೇಳಿದ್ದೆವು, ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಹೀಗಾಗಿ ಈ ರೀತಿ ಆಗಿದೆ ಎಂದು ತಿಳಿಸಿದರು.

ರಾಜಕೀಯ ದುರುದ್ದೇಶದಿಂದ ಒಳ ಮೀಸಲಾತಿ ಮಾಡಿದ್ದಾರೆ. ನಾಲ್ಕು ವರ್ಷದಿಂದ ಯಾಕೆ ಸುಮ್ಮನಿದ್ದು ಈಗ ಯಾಕೆ ಮಾಡಿದ್ದಾರೆ, ಇದು ರಾಜಕೀಯ ದುರುದ್ದೇಶ ಅಲ್ವಾ ಎಂದು ಪ್ರಶ್ನಿಸಿದರು.

ಚುನಾವಣೆ ವೇಳೆ ಯಾಕೆ ತರಾತುರಿಯಲ್ಲಿ ಮಾಡಿದರು, ಅಧಿಕಾರಕ್ಕೆ ಬಂದ ಕೂಡಲೇ ಯಾಕೆ ಮಾಡಲಿಲ್ಲ ಎಂದು ಕಿಡಿಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular