Friday, September 20, 2024
Google search engine
Homeಜಿಲ್ಲೆಮಾರ್ಚ್ 16ರಂದು ಜಲಗನ್ನಡಿ ಕೃತಿ ಬಿಡುಗಡೆ

ಮಾರ್ಚ್ 16ರಂದು ಜಲಗನ್ನಡಿ ಕೃತಿ ಬಿಡುಗಡೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮಾಭಿವೃದ್ಧಿ ಟ್ರಸ್ಟ್ ಮತ್ತು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ವತಿಯಿಂದ ಮಾರ್ಚ್ 16ರಂದು ಸಂಜೆ 4.30ಗಂಟೆಗೆ ತುಮಕೂರಿನ ಕನ್ನಡಭವನದಲ್ಲಿ ಡಾ.ಹನುಮಂತರಾಯಪ್ಪ ಅವರ ಜಲಗನ್ನಡಿ ಕೃತಿಯ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ.

ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಲೇಸಂ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಅಧ್ಯಕ್ಷತೆ ವಹಿಸುವರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಕೃತಿ ಬಿಡುಗಡೆ ಮಾಡುವರು. ಡಾ.ರವಿಕುಮಾರ್ ನೀಹ ಕೃತಿ ಕುರಿತು ಮಾತನಾಡುವರು. ಮುಖ್ಯ ಅತಿಥಿಗಳಾಗಿ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಉದ್ಯಮಿ ಡಿ.ಟಿ. ವೆಂಕಟೇಶ್, ಲೇಖಕ ಡಾ.ಹನುಮಂತರಾಯಪ್ಪ ಆಗಮಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular