Monday, September 16, 2024
Google search engine
Homeಮುಖಪುಟಬಂಡಿಪುರ ಅರಣ್ಯದಲ್ಲಿ ಕಾಡಾನೆ ದಾಳಿ - ವಾಚರ್ ಸಾವು

ಬಂಡಿಪುರ ಅರಣ್ಯದಲ್ಲಿ ಕಾಡಾನೆ ದಾಳಿ – ವಾಚರ್ ಸಾವು

ಕಾಡಾನೆ ದಾಳಿಗೆ ದಡದಹಳ್ಳಿ ಹಾಡಿಯ ಆದಿವಾಸಿ ವಾಚರ್​ ಸಾವನ್ನಪ್ಪಿರುವಂತಹ ಘಟನೆ ಮೈಸೂರಿನಲ್ಲಿ ನಡೆದಿದೆ.

ಎಚ್.ಡಿ.ಕೋಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಲ್ಕೆರೆ ಅರಣ್ಯದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ವಾಚರ್ ಬೊಮ್ಮ ಮೃತಪಟ್ಟಿದ್ದಾರೆ.

ಮಧುಕೊಯ್ಲರ್​ ಜತೆ ಗಸ್ತಿನಲ್ಲಿದ್ದ ವೇಳೆ ದಿಢೀರ್ ಆನೆ ದಾಳಿ ನಡೆಸಿತ್ತು. ಹೀಗಾಗಿ ಕಾಡಾನೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಂದಕಕ್ಕೆ ಬಿದಿದ್ದು, ಬೊಮ್ಮ ಅವರನ್ನು ಸೊಂಡಿಲಿನಿಂದ ಎತ್ತಿ ಎಸೆದಿತ್ತು ಎಂದು ಹೇಳಲಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಕರೆಸಿಕೊಂಡಿದ್ದ ಬೊಮ್ಮ, ಕಾಡಾನೆ ದಾಳಿಯಿಂದ ಮೈಮೂಳೆ ಮುರಿದು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುರಿಸೆಳೆದಿದ್ದಾರೆ.

ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular