ವಿದ್ಯಾರ್ಥಿ ದೆಸೆಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಮುಖಂಡರಾಗಿದ್ದ ಸುರೇಂದ್ರ ಅವರು ಇಂದು ಸಂಜೆ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದ ಇಂದು ನಿಧನರಾಗಿದ್ದಾರೆ.
ನಂತರ ಸಾಕ್ಷರತಾ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅತ್ಯಂತ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಮ್ಮಿಕೊಂಡಿದ್ದ ಸಾಕ್ಷರತಾ ಆಂದೋಲನದಲ್ಲೂ ಕಾರ್ಯ ನಿರ್ವಹಿಸಿದ್ದರು.
ಚಳವಳಿಯೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಸುರೇಂದ್ರ ಅವರು ತನ್ನ ಸ್ನೇಹಿತರೊಂದಿಗೆ ಸೇರಿ ಸಾವಯವ ಹೋಟೆಲ್ ನ್ನು ಎರಡು ವರ್ಷಗಳ ಕಾಲ ನಡೆಸಿದರು. ಎಸ್.ಐಟಿ ಗೇಟ್ ಪಕ್ಕದಲ್ಲಿಯೇ ಇದ್ದ ಸಾವಯವ ಹೋಟೆಲ್ ಮಾಡಿದ್ದರು.
ವಿದ್ಯಾರ್ಥಿ ಚಳವಳಿ, ರೈತ ಚಳವಳಿ ಮತ್ತು ಕಾರ್ಮಿಕ ಚಳವಳಿಯಲ್ಲಿ ಗುರುತಿಸಿಕೊಂಡು ಚಳವಳಿಗೆ ಸಹಕಾರ ನೀಡುತ್ತಿದ್ದ ಸುರೇಂದ್ರ ಅವರು ಎಲ್ಲರೊಂದಿಗೂ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದರು. ಸಮುದಾಯ ತುಮಕೂರು ಸಂಘಟನೆಯಲ್ಲೂ ಕ್ರಿಯಾಶೀಲರಾಗಿ ಭಾಗಿಯಾಗಿದ್ದರು.
ಪ್ರಗತಿ ಪರ ಚಳವಳಿಯಲ್ಲೂ ಪಾಲ್ಗೊಂಡು ಕೆಲಸ ಮಾಡಿದ್ದರು. ಎಲ್ಲರೊಂದಿಗೂ ಒಳ್ಳೆಯ ಒಡನಾಟವಿಟ್ಟುಕೊಂಡಿದ್ದರು.