ಎಡಪಕ್ಷಗಳು ತಿರುವನಂತಪುರಂನ ರಾಜಭವನಕ್ಕೆ ಮಂಗಳವಾರ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಕೇರಳ ಹೈಕೋರ್ಟ್ ನಿರಾಕರಿಸಿದೆ. ಆದರೆ ಸರ್ಕಾರಿ ನೌಕರರು ಆಂದೋಲನದಲ್ಲಿ ಭಾಗವಹಿಸಿದ ಆರೋಪದ ವಿರುದ್ಧ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಸಲ್ಲಿಸಿದ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್. ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅರವನ್ನೊಳಗೊಂಡ ಪೀಠವು ಬಿಜೆಪಿ ಅಧ್ಯಕ್ಷರನ್ನು ಪ್ರತಿನಿಧಿಸುವ ವಕೀಲರನ್ನು ಪ್ರತಿಭಟನಾ ಮೆರವಣಿಗೆಯಿಂದ ಸರ್ಕಾರಿ ನೌಕರರನ್ನು ಹೇಗೆ ಗುರುತಿಸಬಹುದು ಎಂದು ಕೇಳಿದೆ.
ನೌಕರರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಸರ್ಕಾರದ ಆದೇಶ ಎಲ್ಲಿದೆ? ಪ್ರತಿಭಟನಾಕಾರರಿದಂದ ಸರ್ಕಾರಿ ನೌಕರರನ್ನು ಗುರುತಿಸುವುದು ಹೇಗೆ? ಪ್ರತಿಭಟನಾ ಮೆರವಣೀಗೆ ನಡೆಸದಂತೆ ಯಾರನ್ನಾಧರೂ ಹೇಗೆ ಕೇಳುವುದು ಎಂದು ನ್ಯಾಯಾಲಯ ಪ್ರಶ್ನಿಸಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರಸ್ ವರದಿ ಮಾಡಿದೆ.
ಈ ನಡುವೆ ಸುರೇಂದ್ರನ್ ಪರ ವಕೀಲರು ಮೆರವಣಿಗೆಯಲ್ಲಿ ಸರ್ಕಾರ ನೌಕರರು ಭಾಗವಹಿಸುವುದರ ವಿರುದ್ಧ ಮಾತ್ರ ವಿರೋಧವಿದೆ ಎಂದು ಹೇಳಿದರು. ಆದರೆ ಸುರೇಂದ್ರನ್ ಸಲ್ಲಿಸಿರುವ ಪ್ರಾತಿನಿಧ್ಯವನ್ನು ಪರಿಗಣಿಸಿ ಅದರಂತೆ ನಿರ್ಧಾರ ಕೈಗೊಳ್ಳುವಂತೆ ಕೋರ್ಟ್ ಸೂಚಿಸಿದೆ.
ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಸರ್ಕಾಋಇ ನೌಕರರನ್ನು ಒತ್ತಾಯಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ. ಇದಲ್ಲದೆ ಅವರು ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ರಾಜ್ಯದ ಕಾರ್ಯಾಕಾರಿ ಮುಖ್ಯಸ್ಥರ ವಿರುದ್ಧ ರಾಜಕೀಯ ಪ್ರೇರಿತ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಸುರೇಂದ್ರನ್ ಅವರು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


