Sunday, May 18, 2025
Google search engine
Homeಚಳುವಳಿಮಹಿಳಾ ಪರ ಹೋರಾಟಗಾರರಿಗೆ ಸ್ಪೂರ್ತಿಯಾಗಿದ್ದ ಮಂಜುಳ

ಮಹಿಳಾ ಪರ ಹೋರಾಟಗಾರರಿಗೆ ಸ್ಪೂರ್ತಿಯಾಗಿದ್ದ ಮಂಜುಳ

ತುಮಕೂರು ನಗರದ ಜನ ಚಳವಳಿ ಕೇಂದ್ರದಲ್ಲಿ ಇತ್ತೀಚೆಗೆ ನಿಧನರಾದ ಬಿ. ಸಿ.ಮಂಜುಳಾ  ಅವರಿಗೆ ತುಮಕೂರಿನ ಮಹಿಳಾ ದೌರ್ಜನ್ಯ ಒಕ್ಕೂಟ ಮತ್ತು ಪ್ರಗತಿಪರರು ಶ್ರದ್ದಾಂಜಲಿ ಸಲ್ಲಿಸಲಾಯಿತು.

ಮಂಜುಳಾ ಅವರು ಖ್ಯಾತ ಸಾಹಿತಿ ಚಿಂತಕ, ರಂಗಕರ್ಮಿ ಡಾ.ರಾಜಪ್ಪ ದಳವಾಯಿ ಅವರ ಸಂಗಾತಿಯಾಗಿದ್ದು ಅನೇಕ ಸಾಮಾಜಿಕ ಚಿಂತನೆ ಹೋರಾಟಗಳಲ್ಲಿ ತೊಡಗಿದ್ದವರು. ತುಮಕೂರಿನಲ್ಲಿ 2023 ರಲ್ಲಿ  ಜರುಗಿದ ಒಕ್ಕೂಟದ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಹಲವಾರು ಬಾರಿ ಬಂದು ಭಾಗವಹಿಸಿದ್ದರು.

ಅನ್ಯಾಯದ ವಿರುದ್ಧ ಗಟ್ಟಿ ಧ್ವನಿ ಎತ್ತುತ್ತಿದ್ದ ಮಂಜುಳಾ ಅವರು ಮಹಿಳಾ ಪರ ಚಿಂತಕರಿಗೆ ಪ್ರೇರಣೆಯಾಗಿದ್ದರು ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ ಅವರ ಕುಟುಂಬದವರಿಗೆ ಅಗಲಿಕೆಯ ನೋವು ಸಹಿಸುವ.ಶಕ್ತಿ ದೊರಕಲಿ ಎಂದು ತುಮಕೂರು ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಮತ್ತು ಲೇಖಕಿ ಬಾ. ಹ. ರಮಾಕುಮಾರಿ ನುಡಿ ನಮನ ಸಲ್ಲಿಸಿದರು.

ಚಿಂತಕರಾದ ದೊರೈರಾಜ್, ಸಿ. ಯತಿರಾಜು, ಒಕ್ಕೂಟದ ಸಂಗಾತಿಗಳಾದ ಚಿ.ನಾ.ಹಳ್ಳಿಯ ಎನ್.ಇಂದಿರಮ್ಮ ರಾಮಕೃಷ್ಣಪ್ಪ, ದೀಪಿಕಾ ಮರಳೂರು, ಗಂಗಲಕ್ಷ್ಮಿ, ನಿವೃತ್ತ ತಹಶೀಲ್ದಾರ್ ಪುಟ್ಟನರಸಯ್ಯ, ಕಲ್ಯಾಣಿ, ಮಲ್ಲೇಶಪ್ಪ ಮುಂತಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular