Saturday, May 17, 2025
Google search engine
Homeಜಿಲ್ಲೆಗ್ರಾಮ ಸಭೆಯಲ್ಲಿ ಹಲವು ಸಮಸ್ಯೆಗಳು ಹೇಳಿಕೊಂಡ ಮಕ್ಕಳು

ಗ್ರಾಮ ಸಭೆಯಲ್ಲಿ ಹಲವು ಸಮಸ್ಯೆಗಳು ಹೇಳಿಕೊಂಡ ಮಕ್ಕಳು

ಇತ್ತೀಚೆಗೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನಾಗರಘಟ್ಟ ಗ್ರಾಮಪಂಚಾಯ್ತಿ ನಡೆಸಿದ ಮಕ್ಕಳ ಗ್ರಾಮಸಭೆ. ಹಳ್ಳಿಗಳ ಸರ್ಕಾರಿ ಶಾಲಾ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಮಕ್ಕಳ ಸಮಸ್ಯೆಗಳು ಬಗೆಹರಿಯದೆ ಬಡವರ ಮಕ್ಕಳು ಕಲಿಯುವ ಸರ್ಕಾರದ ಶಾಲೆಗಳು ಹೇಳಿಕೊಳ್ಳಲಾರದ ಬಂಗ ನೀಸುತ್ತಿವೆ ಎಂದು ಲೇಖಕ ಉಜ್ಜಜ್ಜಿ ರಾಜಣ್ಣ ತಿಳಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ಬರಬಾರದು ಶಾಲೆಗೆ ಎನ್ನುವಂತಹ ಸಮಸ್ಯೆಗಳನ್ನು ಮಕ್ಕಳು ಗ್ರಾಮ ಸಭೆಯಲ್ಲಿ ಹೇಳಿಕೊಂಡಿದ್ದಾರೆ. ಬಾರೆ ನೀರು ಶಾಲೆಗೆ ನುಗ್ಗಿದರೆ ಕಲಿಯುವ ಮಕ್ಕಳು ಕೊಠಡಿಗಳಲ್ಲಿ ಹೇಗೆ ಕುಳಿತು ಪಾಠ ಕೇಳಲು ಸಾಧ್ಯವಾಗುತ್ತದೆ. ಕೈದಾಳು ಸರ್ಕಾರಿ ಕನ್ನಡ ಶಾಲೆಯ ಮಕ್ಕಳ ದೂರು ಕೇಳಿದರೆ ಮನ ಕರಗುವಂತಿತ್ತು. ಮಳೆಗಾಲದಲ್ಲಿ ಶಾಲಾ ಕೊಠಡಿಗಳಿಗೆ ಮಳೆ ನೀರು ನುಗ್ಗಿದರೆ, ರಾತ್ರಿ ಟಾರ್ಚ ಬೆಳಕಿನಲ್ಲಿ ಹೊರಗೆ ನೀರು ಉಗ್ಗಿ ನೆಲ ಹಾರಿಸಿಕೊಂಡು ಪಾಠ ಕೇಳುವ ಪರಿಸ್ಥಿತಿಯನ್ನು ಕಾಣುವಂತಾಗಿದೆ. ಆಡಳಿತ ಮಾಡುವವರ ಕಾರ್ಯವೈಖರಿ ಬಹಳ ಕೆಟ್ಟದ್ದಾಗಿದೆ ಎಂದರು.

ಮೇಲ್ವಿಚಾರಣೆ ಸಿಮೆಂಟ್ ಅಕ್ಕಳಿಕೆ ಕಳಚಿ ಎಲ್ಲಿ ತಲೆಯ ಮೇಲೆ ಬೀಳುವುದೋ ಎಂಬ ಭಯದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಪಾಠ ಕೇಳುವಂತಾಗಿದೆ ಎಂದು ಹೇಳಿದರು.

ಶೌಚಾಲಯಗಳಿಲ್ಲ, ಶಾಲಾ ಕಾಂಪೌಂಡ್ ಗಳಿಲ್ಲ, ಮಕ್ಕಳು ತಿರುಗಾಡುವ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಿಲ್ಲ, ಶಾಲಾ ಆವರಣ ಇದೆ ನಿಧಾನವಾಗಿ ಚಲಿಸಿ ಎನ್ನುವ ಸೂಚನಾ ಫಲಕಗಳು ರಸ್ತೆಯ ತಿರುವುಗಳಿಗಿಲ್ಲ, ಕುಡಿಯುವ ನೀರಿಲ್ಲ, ಇವೇ ಮೊದಲಾದ ಮಕ್ಕಳ ದೂರುಗಳನ್ನು ಸರಿಪಡಿಸಲು ಗ್ರಾಮ ಪಂಚಾಯತಿಗೆ ಅನುದಾನವಿಲ್ಲ. ಮಕ್ಕಳ ದೂರುಗಳನ್ನು ಕೇಳುವಾಗ, ಹೀಗಿರುವ ಸರ್ಕಾರದ ಕನ್ನಡ ಶಾಲೆಗಳು ಭವಿಷ್ಯದಲ್ಲಿ ಉಳಿಯುತ್ತವೆಯೇ? ಎನ್ನುವ ಪ್ರಶ್ನೆ ಎಂತಹವರನ್ನೂ ಕಾಡುತ್ತದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಕೇಂದ್ರ ಸ್ಥಾನ ನಾಗರಘಟ್ಟ ಸರ್ಕಾರದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಆಟದ ಮೈದಾನವೇ ಇಲ್ಲ. “ಶಾಲೆ ಒಂದೇ- ಸಮಸ್ಯೆಗಳು ಹಲವಾರು ” ಸಮಸ್ಯೆಗಳು ಹತ್ತು ಹಲವಾರು. ಹೀಗಾದರೆ, ಬಡವರ ಮಕ್ಕಳ ಕಲಿಕಾ ಕೇಂದ್ರಗಳು ಸುಧಾರಿಸಲಾರವು ಎಂದರು.

ಕಲಿ- ನಲಿ ಕಾರ್ಯಕ್ರಮ ನಾಮಕಾವಸ್ಥೆಗೆ ಇದೆ. ಕಲಿಯುವ ಶಾಲಾ ಕೊಠಡಿ ಸರಿಯಾಗಿಲ್ಲ, ನಲಿಯಲು ಆಟದ ಮೈದಾನವೇ ಇಲ್ಲ. ಸರ್ಕಾರಿ ಶಾಲೆಗಳ ನಲಿ- ಕಲಿ ಕಾರ್ಯಕ್ರಮದ ಅರ್ಥವಾದರೂ ಏನು? ಆಡಳಿತಕ್ಕೆ ಆಗಿರುವ ಕಾಯಿಲೆಯಾದರೂ ಏನು ಅರ್ಥವಾಗದು ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular