Monday, March 16, 2026
Google search engine
Homeಜಿಲ್ಲೆಜೂನ್ 25ರಂದು ಟ್ರಂಕು-ತಟ್ಟೆ ಪುಸ್ತಕ ಬಿಡುಗಡೆ

ಜೂನ್ 25ರಂದು ಟ್ರಂಕು-ತಟ್ಟೆ ಪುಸ್ತಕ ಬಿಡುಗಡೆ

ಕವಿ ಗುರುಪ್ರಸಾದ್‌ ಕಂಟಲಗೆರೆ ಅವರ ಹಾಸ್ಟಲ್‌ ಅನುಭವಕಥನ ಟ್ರಂಕು-ತಟ್ಟೆ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮವನ್ನು ಜೂನ್ 25ರಂದು ಭಾನುವಾರ ಬೆಳಗ್ಗೆ ತುಮಕೂರಿನ ಟೌನ್ ಹಾಲ್ ನಲ್ಲಿ ಬಳಿ ಇರುವ ಐಎಂಎ ಹಾಲ್ ನಲ್ಲಿ ಏರ್ಪಡಿಸಲಾಗಿದೆ.

ಟ್ರಂಕು-ತಟ್ಟೆ ಪುಸ್ತಕವನ್ನು ವಿಮರ್ಶಕ ಡಾ.ಬಂಜಗೆರೆ ಜಯಪ್ರಕಾಶ್ ಬಿಡುಗಡೆ ಮಾಡಲಿದ್ದಾರೆ. ಚರಕ ಆಸ್ಪತ್ರೆಯ ಡಾ.ಬಸವರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ತುಮಕೂರು ವಿಶ್ವವಿದ್ಯಾನಿಲಯದ ಡಾ.ಡಿ.ವಿ.ಗುಂಡಪ್ಪ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ನಿತ್ಯಾನಂದ ಶೆಟ್ಟಿ, ವಿಮರ್ಶಕ ಡಾ.ರವಿಕುಮಾರ್ ನೀಹ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಭಾಗವಹಿಸುವರು.

ಹಾಸ್ಟಲ್ ಮೇಲ್ವಿಚಾರಕ ನಾಗರಾಜಪ್ಪ, ಚಿಂತಕ ವಿರೂಪಾಕ್ಷ ಡ್ಯಾಗೇರಹಳ್ಳಿ, ಪತ್ರಕರ್ತ ಎಚ್.ವಿ. ವೆಂಕಟಾಚಲ ಪಾಲ್ಗೊಳ್ಳುವರು.

ಟ್ರಂಕು-ತಟ್ಟೆ ಪುಸ್ತಕ ಸಂವಾದದಲ್ಲಿ ಇಂಗ್ಲೀಷ್ ಉಪನ್ಯಾಸಕ ಕಾಂತರಾಜು ಗೊಲ್ಲರಹಟ್ಟಿ, ಡಾ.ಮೂರ್ತಿ ತಿಮ್ಮನಹಳ್ಳಿ, ಕೊಟ್ಟ ಶಂಕರ್, ಡಾ.ಆಶಾ ಬಗ್ಗನಡು, ಬಿದಲೋಟಿ ರಂಗನಾಥ್, ಭಗತ್ ಸಿಂಗ್ ಕುಂದೂರು ಭಾಗಿಯಾಗುವರು ಎಂದು ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular