Tuesday, March 17, 2026
Google search engine
Homeಮುಖಪುಟಯು.ಟಿ.ಖಾದರ್ ವಿಧಾನಸಭೆ ಅಧ್ಯಕ್ಷ

ಯು.ಟಿ.ಖಾದರ್ ವಿಧಾನಸಭೆ ಅಧ್ಯಕ್ಷ

ಶಾಸಕ ಯು.ಟಿ.ಖಾದರ್ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಇನ್ನು ಮುಂದೆ ಖಾದರ್ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಟಿ.ಬಿ ಜಯಚಂದ್ರ, ಆರ್.ವಿ.ದೇಶಪಾಂಡೆ ಅವರು ಸ್ಪೀಕರ್ ಆಗಲು ಒಪ್ಪದೇ ಇರುವ ಕಾರಣಕ್ಕೆ ಯು.ಟಿ.ಖಾದರ್ ಅವರನ್ನು ಸಭಾಧ್ಯಕ್ಷರನ್ನಾಗಿ ಮಾಡಲಾಗಿದೆ.

ಈ ಕುರಿತು ಫೇಸ್ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸಾಹಿತಿ ಪುರುಷೋತ್ತಮ ಬಿಳಿಮಲೆ ಅವರು, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಮಾಡುತ್ತಿದ್ದ ಅನಾಹುತವೊಂದರ ಬಗ್ಗೆ ನಮ್ಮ ಕುಡಲದ ಯು ಟಿ ಖಾದರ್‌ ಅವರಿಗೆ ಹೇಳಿದ್ದೆ. ಅವರದನ್ನು ಸರಿಪಡಿಸಿ ʼ ಸರಿ ಮನ್ತೆ ಆವೇʼ ( ಸರಿ ಮಾಡಿದೆ ಆಯಿತಾ) ಎಂದು ನನಗೆ ತಿಳಿಸಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

ಖಾದರ್‌ ಕಾಂಗ್ರೆಸ್ಸಿನ ಆಸ್ತಿ, ಮಂತ್ರಿಯಾಗಿದ್ದಾಗ ( ಮುಖ್ಯವಾಗಿ ಆರೋಗ್ಯ ಸಚಿವ) ಬಹಳ ಒಳ್ಳೆಯ ಕೆಲಸಗಳನ್ನು ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದು ದೇಶದ ಗಮನ ಸೆಳೆದಿದ್ದರು ಎಂದು ಹೇಳಿದ್ದಾರೆ.

ಅವರು ಸ್ಪೀಕರ್‌ ಆಗುವ ಹೊತ್ತು , ಸ್ಪೀಕರ್‌ ಹುದ್ದೆ ತನ್ನ ಘನತೆಯನ್ನು ಕಡಿಮೆ ಮಾಡಿಕೊಂಡಿರುವುದು ನಿಜ, ಆದರೆ ಖಾದರ್‌ ಆ ಹುದ್ದೆಯ ಘನತೆಯನ್ನು ಹೆಚ್ಚು ಮಾಡುತ್ತಾರೆ ಎಂಬುದು ಅಷ್ಟೇ ನಿಜ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಕಾಂಗ್ರೆಸ್ಸಿಗೆ ಸದನದಲ್ಲಿ ಸ್ಪಷ್ಟ ಬಹುಮತ ಇರುವುದರಿಂದಾಗಿ ಖಾದರ್‌ ಸಾಹೇಬರ ಹಾದಿ ಸುಗಮವಾಗಲಿದೆ. ಕುಡಲದ ಕಂದನಿಗೆ ಶುಭಾಶಯಗಳು ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular