ಶಾಸಕ ಯು.ಟಿ.ಖಾದರ್ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಇನ್ನು ಮುಂದೆ ಖಾದರ್ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಟಿ.ಬಿ ಜಯಚಂದ್ರ, ಆರ್.ವಿ.ದೇಶಪಾಂಡೆ ಅವರು ಸ್ಪೀಕರ್ ಆಗಲು ಒಪ್ಪದೇ ಇರುವ ಕಾರಣಕ್ಕೆ ಯು.ಟಿ.ಖಾದರ್ ಅವರನ್ನು ಸಭಾಧ್ಯಕ್ಷರನ್ನಾಗಿ ಮಾಡಲಾಗಿದೆ.
ಈ ಕುರಿತು ಫೇಸ್ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸಾಹಿತಿ ಪುರುಷೋತ್ತಮ ಬಿಳಿಮಲೆ ಅವರು, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಮಾಡುತ್ತಿದ್ದ ಅನಾಹುತವೊಂದರ ಬಗ್ಗೆ ನಮ್ಮ ಕುಡಲದ ಯು ಟಿ ಖಾದರ್ ಅವರಿಗೆ ಹೇಳಿದ್ದೆ. ಅವರದನ್ನು ಸರಿಪಡಿಸಿ ʼ ಸರಿ ಮನ್ತೆ ಆವೇʼ ( ಸರಿ ಮಾಡಿದೆ ಆಯಿತಾ) ಎಂದು ನನಗೆ ತಿಳಿಸಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.
ಖಾದರ್ ಕಾಂಗ್ರೆಸ್ಸಿನ ಆಸ್ತಿ, ಮಂತ್ರಿಯಾಗಿದ್ದಾಗ ( ಮುಖ್ಯವಾಗಿ ಆರೋಗ್ಯ ಸಚಿವ) ಬಹಳ ಒಳ್ಳೆಯ ಕೆಲಸಗಳನ್ನು ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದು ದೇಶದ ಗಮನ ಸೆಳೆದಿದ್ದರು ಎಂದು ಹೇಳಿದ್ದಾರೆ.
ಅವರು ಸ್ಪೀಕರ್ ಆಗುವ ಹೊತ್ತು , ಸ್ಪೀಕರ್ ಹುದ್ದೆ ತನ್ನ ಘನತೆಯನ್ನು ಕಡಿಮೆ ಮಾಡಿಕೊಂಡಿರುವುದು ನಿಜ, ಆದರೆ ಖಾದರ್ ಆ ಹುದ್ದೆಯ ಘನತೆಯನ್ನು ಹೆಚ್ಚು ಮಾಡುತ್ತಾರೆ ಎಂಬುದು ಅಷ್ಟೇ ನಿಜ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಕಾಂಗ್ರೆಸ್ಸಿಗೆ ಸದನದಲ್ಲಿ ಸ್ಪಷ್ಟ ಬಹುಮತ ಇರುವುದರಿಂದಾಗಿ ಖಾದರ್ ಸಾಹೇಬರ ಹಾದಿ ಸುಗಮವಾಗಲಿದೆ. ಕುಡಲದ ಕಂದನಿಗೆ ಶುಭಾಶಯಗಳು ಎಂದು ತಿಳಿಸಿದ್ದಾರೆ.


