Tuesday, March 17, 2026
Google search engine
Homeಮುಖಪುಟಜೀರೋ ಟ್ರಾಫಿಕ್ ಸೌಲಭ್ಯ ನಿರಾಕರಣೆಗೆ ವ್ಯಾಪಕ ಬೆಂಬಲ - ಉತ್ತಮ ನಿರ್ಧಾರ ಎಂದ ನೆಟ್ಟಿಗರು

ಜೀರೋ ಟ್ರಾಫಿಕ್ ಸೌಲಭ್ಯ ನಿರಾಕರಣೆಗೆ ವ್ಯಾಪಕ ಬೆಂಬಲ – ಉತ್ತಮ ನಿರ್ಧಾರ ಎಂದ ನೆಟ್ಟಿಗರು

ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ನೆಟ್ಟಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳ ಈ ನಿರ್ಧಾರ ಸ್ವಾಗತಾರ್ಹ. ಗೃಹ ಸಚಿವರು ಇದನ್ನೇ ಪಾಲಿಸಲಿ ಎಂದು ನೆಟ್ಟಿಗರು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜೀರೋ ಟ್ರಾಫಿಕ್ ನಿರಾಕರಿಸಿರುವುದು ಒಳ್ಳೆಯ ನಿರ್ಧಾರ. ಗೃಹ ಸಚಿವರಾಗುವವರೂ ಮುಖ್ಯಮಂತ್ರಿ ಯವರನ್ನು ಅನುಸರಿಸಿ ಜೀರೋ ಟ್ರಾಫಿಕ್ ನಿರಾಕರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕುಮಾರ್ ದಿನೂ ಒತ್ತಾಯಿಸಿದ್ದಾರೆ.

May be an image of 2 people, dais and text that says "CM of Karnataka @CMofKarnataka ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕಷೆಗೊಂಡಿದ್ದೇನೆ. @siddaramaiah Translate Tweet pm 21 23 6:29pm-21May23108Views 108 Views"

ರಂಗಭೂಮಿ ಕಲಾವಿದ ಸುರೇಂದ್ರ ರಾವ್, ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ತೀರ್ಮಾನವೇನೋ ಒಳ್ಳೆಯದೇ, ಆದರೆ ಈ ತೀರ್ಮಾನ ಎಷ್ಟು ದಿನ ಇರುತ್ತೆ ಎನ್ನುವುದು ಅನುಮಾನ. ಇದು ಪ್ರಾಯೋಗಿಕ ನಿರ್ಧಾರವಲ್ಲ ಎಂದು ಮಾತ್ರ ಹೇಳಬಹುದು. ಅಂತಹ ವಿಶೇಷ ಸೌಲಭ್ಯ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ಮಾತ್ರ ಇರಬೇಕು ಅಷ್ಟೆ ಎಂದಿದ್ದಾರೆ.

ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ತೀರ್ಮಾನ ಸ್ವಾಗತಾರ್ಹ. ಇದು ಒಳ್ಳೆಯ ಬೆಳವಣಿಗೆ ಎಂದು ಸೀನಾ ಎಂಬುವರು ಹೇಳಿದ್ದಾರೆ. ಹಲವರು ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಅನ್ನು ಹಂಚಿಕೊಂಡಿರುವ ನೆಟ್ಟಿಗರು ಸಿದ್ದರಾಮಯ್ಯ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular