ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರಿಗೆ ಚುನಾವಣೆಯ ಫಲಿತಾಂಶ ಬರುವ ಮೊದಲೇ ಶಾಸಕರು ಎಂಬ ನಾಮಫಲಕವನ್ನು ಆವರ ಬೆಂಬಲಿಗರು ನೀಡಿದ್ದಾರೆ. ಇದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದರು ಎನ್ನುವಂತೆ ಆಗಿದೆ.
ಮೇ 13ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಬರಲಿದೆ. ಇದಕ್ಕೂ ಮೊದಲೇ ಗೋವಿಂದರಾಜು, ಶಾಸಕರು, ತುಮಕೂರು ನಗರ ಕ್ಷೇತ್ರ ಎಂಬ ನಾಮಫಲಕವನ್ನು ಗೋವಿಂದರಾಜು ಅವರಿಗೆ ನೀಡಿದ್ದು ಜೆಡಿಎಸ್ ಬೆಂಬಲಿಗರು ಅತೀವ ವಿಶ್ವಾಸದಲ್ಲಿರುವುದು ಕುತೂಹಲ ಮೂಡಿಸಿದೆ.
ಎನ್.ಗೋವಿಂದರಾಜು ಅಭಿಮಾನಿಗಳು ನೀಡಿದ ನೇಮ್ ಪ್ಲೇಟ್ ಅನ್ನು ಗೋವಿಂದರಾಜು ಯಾವುದೇ ಮುಜುಗರ ಮಾಡದೆ ನಾಮಫಲಕವನ್ನು ಸ್ವೀಕರಿಸಿದ್ದಾರೆ.


