Wednesday, March 18, 2026
Google search engine
Homeಮುಖಪುಟಡಾ.ರಾಜ್ ಬಗ್ಗೆ ಸಾಹಿತಿಗಳು, ಚಿಂತಕರು ಕಂಡಂತೆ

ಡಾ.ರಾಜ್ ಬಗ್ಗೆ ಸಾಹಿತಿಗಳು, ಚಿಂತಕರು ಕಂಡಂತೆ

” ಗೋಕಾಕ್ ಚಳುವಳಿಯ ನೇತೃತ್ವ ನನ್ನ ನೇತೃತ್ವಕ್ಕಿಂತ ರಾಜ್ ಕುಮಾರ್ ನೇತೃತ್ವ ಹೆಚ್ಚು ಸಮಂಜಸ. ಏಕೆಂದರೆ, ವಿಶ್ವ ಮಾನವ ಸಂದೇಶವನ್ನು ಕರ್ನಾಟಕದಲ್ಲಿ ಸಾರ ಬಲ್ಲ ಏಕೈಕ ವ್ಯಕ್ತಿ ಎಂದರೆ ಅದು ರಾಜ್ ಕುಮಾರ್ ಮಾತ್ರ!”

-ಕುವೆಂಪು

“ಕೌಟುಂಬಿಕ ಸಾಮರಸ್ಯವನ್ನು ತೆರೆಯ ಮೇಲೆ ಯಥಾವತ್ ಪ್ರದರ್ಶಿಸಿದ ಅದ್ಭುತ ಕಲಾವಿದ. ಹೆಣ್ಣಿನ ಬಾಳ್ವೆ, ಆಕೆಯ ಕುಟುಂಬ ನಿರ್ವಹಣೆಯನ್ನು ತಮ್ಮ ಚಿತ್ರದಲ್ಲಿ ನೋಡುಗ ಮನಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ತಮ್ಮ ಪ್ರತಿ ಚಿತ್ರದಲ್ಲು ಕಾಪಾಡಿಕೊಂಡು ಬಂದ ಏಕೈಕ ನಟ ಎಂದರೆ ರಾಜಕುಮಾರ”

-ಕೆ.ಎಸ್.ನರಸಿಂಹಸ್ವಾಮಿ

“ನಟ ಎಂಜಿಆರ್, ಸೆಟ್ ನಲ್ಲಿ ಹೇಗಿದ್ದರೋ ಹಾಗೆ ವಿಧಾನ ಸೌಧದ ಒಳಕ್ಕೆ ಹಾಗು ಸಾರ್ವಜನಿಕರ ಎದುರು ಸಿನಿಮಾದಲ್ಲಿ ಪ್ರದರ್ಶಿಸಿದಂತೆ ಆಲಾಪಿಸುತ್ತಿದ್ದರು. ಆದರೆ ನಮ್ಮ ರಾಜ್ ಕುಮಾರ್ ಮುಖಕ್ಕೆ ಬಣ್ಣ ಹಚ್ಚಿಕೊಂಡು ಕ್ಯೆಮರ ಎದುರು ನಿಂತಾಗಲಷ್ಟೆ ಅವರು ಅವರಾಗಿ ಇರುತ್ತಿರಲಿಲ್ಲ ಬದಲಿಗೆ ಆ ಪಾತ್ರದಲ್ಲಿ ಪಾತ್ರವಾಗಿ, ಕ್ಯೆಮರ ಬಿಟ್ಟು ಬಣ್ಣ ಕಳಚಿ ತಮ್ಮ ಎಂದಿನ ಬಿಳಿ ಉಡುಪು ಧರಿಸಿದರೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಗೋಚರಿಸುತ್ತಿದ್ದರು. ಪರದೆ ಮತ್ತು ಪರದೆಯಾಚೆಗಿನ ಜೀವನದಲ್ಲಿ ಅವರ ಮುಖ ಭಿನ್ನತೆಯಿಂದ ಕೂಡಿರುತ್ತಿತ್ತು”

-ಯು.ಆರ್.ಅನಂತಮೂರ್ತಿ

“ರಾಜಕುಮಾರ ನನಗಿಂತ ವಯಸ್ಸಿನಲ್ಲಿ ಚಿಕ್ಕವ. ಆತನದು ಸಹಜ ಅಭಿನಯ. ನನ್ನನ್ನು ಕಂಡರೆ ತುಂಬಾ ಗೌರವವಂತೆ. ಹಾಗಂತ ಸಿನಿಮಾಕ್ಕೆ ಸಂಬಂಧಿಸಿದ ಅನೇಕರು ನನ್ನೊಂದಿಗೆ ಮಾತಾಡಿದ್ದಾರೆ. ಆತ ನನ್ನ ಕೆಲ ಪುಸ್ತಕ ಓದಿಕೊಂಡು ನನ್ನ ಕಥೆಯಲ್ಲಿ ಪಾತ್ರ ಮಾಡುವ ಆಸೆಯಂತೆ. ತುಂಬಾ ವಿನಯಶೀಲ ವ್ಯಕ್ತಿ. ಗೋಕಾಕ್ ಚಳುವಳಿ ಯಶಸ್ಸು ಆತನಿಗೆ ಸಲ್ಲಬೇಕು.‌ ಇನ್ನಾರೋ ನನ್ನಂಥವನು ಅದರ ಮುಂದಾಳಾಗಿದ್ದರೆ ನಾಕು ಜನರೂ ಸೇರುತ್ತಿರಲಿಲ್ಲವೇನೋ! ಹಾಗಾಗಿ ಆತ ಕನ್ನಡ ಮಾತ್ರವಲ್ಲ ಭಾರತದ ಸಾಂಸ್ಕೃತಿಕ ವಲಯದಲ್ಲಿ ಸಂಚಲನ ಸೃಷ್ಠಿ ಮಾಡಿದ ವ್ಯಕ್ತಿ”

-ಡಾ.ಕೆ.ಶಿವರಾಮ ಕಾರಂತ.

“ಮುತ್ತುರಾಜ ಹೆಸರಿನ ವ್ಯಕ್ತಿ ರಾಜ್ ಕುಮಾರ್ ಎಂಬ ಪಾತ್ರವನ್ನು ಎಲ್ಲೂ ಕಳಂಕ ಬರದ ರೀತಿ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ”

-ದೇವನೂರ ಮಹಾದೇವ.

“ನಮ್ಮ ರಾಜ್ ಕುಮಾರ್ ಸರ್, ಕುವೆಂಪು ಕರ್ನಾಟಕ ರತ್ನವಾಗದೆ ನಾನು ಹೇಗೆ ಆಗಲು ಸಾಧ್ಯ? ಖಂಡಿತ ಬೇಡ ಅಂದು ಬಿಟ್ಟರು”

– ಎಸ್.ಬಂಗಾರಪ್ಪ

(ಯು.ಆರ್.ಅನಂತಮೂರ್ತಿ ಜೊತೆ ಮಾತಾಡುವಾಗ ಹೇಳಿದ್ದು. ನಂತರ ಕುವೆಂಪು ಮತ್ತು ರಾಜ್ ಕುಮಾರ್ ಗೆ ಇಬ್ಬರಿಗೂ ಏಕ ಕಾಲದಲ್ಲಿ “ಪ್ರಥಮ ಕರ್ನಾಟಕ ರತ್ನ” ಪುರಸ್ಕಾರ ಘೋಷಣೆ 1992)

“ಡಾ.ರಾಜ್ ಕನ್ನಡದ ಐಕಾನ್. ಅವರಲ್ಲಿರುವ ಸಹಜ ಹಳ್ಳಿಗಾಡಿನ ಸಾಂಪ್ರದಾಯಿಕವಾದ ಆಚರಣಾ ದೇವರ ಭಕ್ತಿಯನ್ನು ಚಡ್ಡಿಗಳು ಹೈಜಾಕ್ ಮಾಡುವ ಅಪಾಯವಿದೆ. ಹಾಗಾಗಿ ಗೋಕಾಕ್ ಚಳುವಳಿ ಯಶಸ್ಸಿಗೆ ಥ್ಯಾಂಕ್ಸ್ ಹೇಳುವ ನೆಪದಲ್ಲಿ ಅವರನ್ನು ಸಂದರ್ಶಿಸಲು ಅವರಿಗೆ ಪರಿಚಯವಿದ್ದ ಚಿದಾನಂದಮೂರ್ತಿಗಳ ಜೊತೆ ಹೋದೆ. ಕಂಠೀರವ ಸ್ಟುಡಿಯೋ ಅದು. ನಾನು ಅವರನ್ನು ಕಂಡೊಡನೆ ಅವರಿಗಿಂತ ಹತ್ತು ವರ್ಷ ಚಿಕ್ಕವರಾದ ನಮ್ಮ ಚಿದಾನಂದಮೂರ್ತಿಗಳು ಅವರ ಚಿಕ್ಕಪ್ಪನ ಹಾಗೆ ಕಾಣುತ್ತಿದ್ದರು. ರಾಜ್ ಮುವ್ವತ್ತರ ಹರೆಯದವರಂತೆ ಪಾದರಸದಂತೆ ಓಡೋಡಿ ಬಂದು ಎಷ್ಟೊ ವರ್ಷಗಳ ಪರಿಚಯದವರಂತೆ ನನ್ನೊಡನೆ ಆತ್ಮೀರಂತೆ ವರ್ತಿಸಿದರು. ಅಷ್ಟು ಹೊತ್ತು ಮಾತಾಡಿದ ಮೇಲೆ ಕೊನೆಯ ಪ್ರಶ್ನೆ “ನೀವು ರಾಘವೇಂದ್ರರ ಬಗ್ಗೆ ಹಾಗೆ ಹಾಡಬಾರದಿತ್ತು” ಎಂದೆ. ಅವರು ” ನಾನು ಭಕ್ತಿ ಹಾಡನ್ನು ಭಕ್ತಿಯಿಂದ ಹೇಳಿದ್ದೇನೆ ಅಷ್ಟೆ ” ಎಂದರು. ನನ್ನ ಒಳ ಅರ್ಥ ಅವರಿಗೆ ತಲುಪಿದಂತೆ ಕಾಣಲಿಲ್ಲ. ಹಾಗಾಗಿ ಅವರಿಗೆ ಸುಸ್ತು ಮಾಡಲು ಇಷ್ಟವಾಗದೆ ವಿಶ್ ಮಾಡಿ ಬಂದೆ.”

-ಪಿ.ಲಂಕೇಶ್

“ರಾಜ್ ಕುಮಾರ್ ಬಂಗಾರದ ಮನುಷ್ಯ ಅಲ್ಲ ಬೆವರಿನ ಮನುಷ್ಯ”

-ಬರಗೂರು ರಾಮಚಂದ್ರಪ್ಪ

“ಅವರದು ಅದ್ಭುತ ವ್ಯಕ್ತಿತ್ವ. ಅವರೇ ನನಗೆ ಸ್ಪೂರ್ತಿ”

-ಕಮಲ್ ಹಾಸನ್

“ನಮ್ಮ ಬಾಲಿವುಡ್ ನಲ್ಲಿ ರಾಜ್ ಇದ್ದಿದ್ದರೆ ನಾವು ಎಲ್ಲಿರುತ್ತಿದ್ದೆವೋ ಗೊತ್ತಿಲ್ಲ”

-ಅಮಿತಾಬ್ ಬಚ್ಚನ್

“ನೀವು ರಾಜ್ ಕುಮಾರ್ ನಾಡಿನವರೇ..? ವೀರಪ್ಪನ್ ಕಿಡ್ನ್ಯಾಪ್ ಮಾಡಿದ್ನಂತೆ..? ನೋಡಿ ನಮ್ಮ ಕಾಶ್ಮೀರ್ ತುಂಬ ಪೇಪರಲ್ಲಿ ಟೀವಿಲಿ ಅದೇ ಸುದ್ದಿ..! ಅವರು ಇನ್ನೂ ಆ್ಯಕ್ಟ್ ಮಾಡ್ತಾ ಇದ್ರ..? ಎಂಥ ನಟ..ಅಬ್ಬಾ ಅದ್ಭುತ ರೀ.. ಇಲ್ಲಿಗೆ ಅವರು ಶೂಟಿಂಗೆ ಅಂತ ಬಂದಿದ್ರು.. ಮೂರು ಮೂರು ಪಾತ್ರ.. ಆ ವ್ಯಕ್ತಿ ಮೂರು ಮೂರು ತರ ಕಾಣ್ತಿದ್ರು… ನಾನು ಕರ್ನಾಟಕ ಬಂದಾಗೆಲ್ಲ ಅವ್ರ ಚಿತ್ರ ನೋಡೇ ಬರ್ತಿದ್ದೆ. ಭಾಷೆ ತಿಳಿಯದಿದ್ದರೇನು ಅವರ ಆ್ಯಕ್ಟಿಂಗ್ ಮುಖ ಎಲ್ಲವನ್ನು ತಿಳಿಸ್ತಿತ್ತು ರೀ…)

-ಕಾಶ್ಮೀರದ ಸೇಬು ವ್ಯಾಪಾರಿ ನಜ಼ೀಮ್

“ದಿ ಹಿಂದೂ” ಪತ್ರಿಕೆ ವರದಿಗಾರನ ಎದುರು ಆಡಿದ ಮಾತು.

ಹೀಗೆ ರಾಜ್ ಬಗ್ಗೆ ಇನ್ನು ಅನೇಕ ಚಿಂತಕರು ಲೇಖಕರು ಹೇಳಿದ್ದಾರೆ. ಅವರ ವ್ಯಕ್ತಿತ್ವವೇ ಅಂಥದ್ದು.

ಬರೆಹ: ಎಂ.ಜವರಾಜ್, ಅವರ ಫೇಸ್ಬುಕ್ ವಾಲ್ ನಿಂದ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular