ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಾರ್ಮಸ್ ವಿಭಾಗದಲ್ಲಿ ಕೃಷ್ಣಾ ನಗರದ ವಿದ್ಯಾನಿಧಿ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು 600 ಅಂಕಗಳಿಗೆ 595 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾರೆ.
ಕಾರ್ಮಸ್ ವಿಭಾಗದ ಚಿನ್ಮಯಿ ಎಂ, ಮತ್ತು ಗೀತಾ ಅವರುಗಳು 600ಕ್ಕೆ 595 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ರ್ಯಾಂಕ್ ಗಳಿಸಿದ್ದಾರೆ.
ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಚಿನ್ಮಯಿ.ಎಂ. ಮಾತನಾಡಿ, ದ್ವಿತೀಯ ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಬಂದಿರುವುದು ಅತ್ಯಂತ ಖುಷಿ ತಂದಿದೆ. ನನಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ ತಂದೆ ತಾಯಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ಈ ಫಲಿಶಾಂತಕ್ಕೆ ನನ್ನ ನಿರಂತರ ಪರಿಶ್ರಮದ ಜೊತೆಗೆ, ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಚಾರ್ಟೆಡ್ ಅಕೌಂಟೆಂಟ್ ಆಗಬೇಕೆಂಬುದು ನಮ್ಮ ಬಯಕೆ. ಇದಕ್ಕಾಗಿ ಈಗಾಗಲೇ ತರಗತಿಗಳನ್ನು ಸೇರಿದ್ದೇನೆ. ನಮ್ಮ ಪೋಷಕರು, ಅದರಲ್ಲಿಯೂ ನಮ್ಮ ತಾಯಿ ನಿರಂತರವಾಗಿ ಕಾಲೇಜಿನ ಪೋಷಕರ ಸಭೆಯಲ್ಲಿ ಭಾಗವಹಿಸಿ, ಪ್ರಶ್ನೆ ಮಾಡುತ್ತಿದ್ದರು. ಹೆಚ್ಚಿನ ಹೊಂ ವರ್ಕಗೆ ಪ್ರೇರೆಪಿಸುತ್ತಿದ್ದರು ಎಂದು ಹೇಳಿದರು.

ಮತ್ತೊಬ್ಬ ವಿದ್ಯಾರ್ಥಿನಿ ಈ.ಗೀತಾ ಮಾತನಾಡಿ, ನಮ್ಮದು ಚಿಕ್ಕನಾಯಕಹಳ್ಳಿ. ತಂದೆ ಈಶ್ವರ್ ವ್ಯವಸಾಯಗಾರರು, ತಾಯಿ ಮನೆ ನೋಡಿಕೊಳ್ಳುತ್ತಾರೆ. ನಾವು ಇಲ್ಲಿ ಹಾಸ್ಟಲ್ನಲ್ಲಿ ಇದ್ದು ಓದಿಕೊಳ್ಳುತಿದ್ದು, ಬೆಳಗ್ಗೆ 5 ಗಂಟೆಗೆ ಎದ್ದು ಅಭ್ಯಾಸ ಆರಂಭಿಸುತ್ತಿದ್ದವು. ನಿರಂತರ ಪ್ರಯತ್ನ ಹಾಗೂ ಕಾಲೇಜಿನ ಶಿಕ್ಷಕರ ಪರಿಶ್ರಮದ ಫಲವಾಗಿ ನಮಗೆ 3ನೇ ರ್ಯಾಂಕ್ ಬಂದಿದೆ. ನಾನು ಸಿ.ಎ. ಮಾಡಬೇಕೆಂದಿದ್ದೇನೆ ಎಂದು ತಿಳಿಸಿದರು.


