ಖಾತೆ ಹಂಚಿಕೆಗೂ ಮುನ್ನ ಆಗಸ್ಟ್ 06ರಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ.ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದರು. ಬಳಿಕ ಮಠಾಧೀಶ ಸಿದ್ದಲಿಂಗ ಸ್ವಾಮಿಗಳಿಗೆ ಶಾಲುಹೊದಿಸಿ ಸನ್ಮಾನಿಸಿದರು.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವವರು ಯಾವುದೇ ಸಚಿವರು ಇಂತಹದ್ದೇ ಖಾತೆ ನೀಡುವಂತೆ ಒತ್ತಡ ಹೇರಿಲ್ಲ ಎಂದು ಸ್ಪಪ್ಟಪಡಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿರುವುದು ಅದೃಷ್ಟ. ಮಹದಾಯಿ ನೀರನ್ನು ಇನ್ನು 60 ದಿನಗಳಲ್ಲಿ ತರುವುದಾಗಿ ಹೇಳಿದರು. ಇರುವ ಸಣ್ಣಪುಟ್ಟ ತೊಡಕುಗಳನ್ನು ನಿವಾರಿಸಿಕೊಂಡು ರಾಜ್ಯಕ್ಕೆ ಬರಬೇಕಾಗಿರುವ 4 ಟಿಎಂಸಿ ನೀರನ್ನು ತರಲು ಶ್ರಮಿಸುತ್ತೇನೆ. ಎರಡು ತಿಂಗಳೊಳಗೆ ಒಳ್ಳೆಯ ಸುದ್ದಿಯನ್ನು ತರುತ್ತೇನೆ ಎಂದು ಭರವಸೆ ನೀಡಿದರು.