Wednesday, March 18, 2026
Google search engine
Homeಮುಖಪುಟನನಗೆ ಟಿಕೆಟ್ ತಪ್ಪಲು ಅಪ್ಪ-ಮಗನೇ ಕಾರಣ - ಸೊಗಡು ಶಿವಣ್ಣ ಆಕ್ರೋಶ

ನನಗೆ ಟಿಕೆಟ್ ತಪ್ಪಲು ಅಪ್ಪ-ಮಗನೇ ಕಾರಣ – ಸೊಗಡು ಶಿವಣ್ಣ ಆಕ್ರೋಶ

ತುಮಕೂರು ಲೋಕಸಭಾ ಸದಸ್ಯ, ನಗರ ಶಾಸಕ, ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರು ಸೇರಿ ಈ ನಾಲ್ವರಿಂದಲೇ ನನಗೆ ಟಿಕೆಟ್ ಕೈತಪ್ಪಲು ಕಾರಣ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜಕೀಯವಾಗಿ ನನ್ನನ್ನು ಮುಗಿಸಲು ಸಂಚು ರೂಪಿಸಿ, ಟಿಕೆಟ್ ತಪ್ಪಿಸಿದ್ದಾರೆ ಎಂದು ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್, ಮಾಜಿ ಶಾಸಕ ಬಿ.ಸುರೇಶ್ ಗೌಡ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಸರನ್ನು ಪ್ರಸ್ಥಾಪಿಸದೆ ವಾಗ್ದಾಳಿ ನಡೆಸಿದರು.

ತಿಪಟೂರು ಇಂಜಿನಿಯರಿಂಗ್ ಕಾಲೇಜಿಗೆ ಮಂಜೂರಾಗಿದ್ದ 50 ಕೋಟಿ ರೂ ಅನುದಾನವನ್ನು ಅಪ್ಪ, ಮಗ ಸೇರಿ ತಮ್ಮ ಸಿಐಟಿ ಕಾಲೇಜಿಗೆ ಅನುದಾನ ಪಡೆದುಕೊಂಡಿದ್ದಾರೆ. ಕಾಲೇಜು ಕಟ್ಟಿರುವ ಜಾಗ ಸಹ ವಿವಾದಕ್ಕೀಡಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ದೂರಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆದಿದ್ದು, ರಿಂಗ್ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ 120 ಕೋಟಿ, ಕ್ರೀಡಾಂಗಣ ಸಾಕಷ್ಟು ಅವ್ಯವಹಾರ ನಡೆದಿದೆ. ರಿಂಗ್ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ 120 ಕೋಟಿ, ಕ್ರೀಡಾಂಗಣ ನವೀಕರಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಮುಂದಿನ ದಿನಗಳಲ್ಲಿ ಇದೆಲ್ಲವನ್ನು ಬಹಿರಂಗಪಡಿಸುವೆ. ಈ ಎಲ್ಲಾ ಹಗರಣಗಳನ್ನ ಸಿಬಿಐ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದರು.

ರಾಜಿನಾಮೆ ಸಲ್ಲಿಕೆ:-

ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದು, ಇಂದು ಬೆಳಗ್ಗೆ ಇ-ಮೇಲ್ ಮೂಲಕ ಪಕ್ಷದ ರಾಜ್ಯಾಧ್ಯಕ್ಷರಿಗೆ ತಮ್ಮ ರಾಜಿನಾಮೆ ರವಾನಿಸಿರುವ ಪತ್ರ ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿ, ಇದೀಗ ಯುಗ ಆರಂಭವಾಗುತ್ತಿದೆ ಎಂದರು.

ಸ್ಪರ್ಧೆ ಖಚಿತ:

ಪ್ರಸಕ್ತ ಚುನಾವಣೆಯಲ್ಲಿ ನಗರ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ. ಏಪ್ರಿಲ್ 20ರೊಳಗೆ ನಾಮಪತ್ರ ಸಲ್ಲಿಕೆ ಹಾಗೂ ಸ್ಪರ್ಧಿಸುವ ರೂಪುರೇಶೆಗಳನ್ನು ಬಹಿರಂಗಪಡಿಸುವುದಾಗಿ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮುಖಂಡರಾದ ಜಯಸಿಂಹ, ಧನಿಯಾಕುಮಾರ್, ನರಸಿಂಹಯ್ಯ, ಶಾಂತರಾಜು, ಶಬ್ಬೀರ್ ಅಹಮದ್, ಚೌಡೇಶ್, ಕುಮಾರಸ್ವಾಮಿ, ರಾಜಕುಮಾರ್ ಗುಪ್ತ, ಹರೀಶ್, ಟಿ.ವಿ.ಮಂಜುನಾಥ್, ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು


RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular