Wednesday, March 18, 2026
Google search engine
Homeಮುಖಪುಟಅನಿಲ್ ಬಿಜೆಪಿ ಸೇರ್ಪಡೆಯಿಂದ ತೀವ್ರ ನೋವಾಗಿದೆ - ಎ.ಕೆ.ಆಂಟನಿ

ಅನಿಲ್ ಬಿಜೆಪಿ ಸೇರ್ಪಡೆಯಿಂದ ತೀವ್ರ ನೋವಾಗಿದೆ – ಎ.ಕೆ.ಆಂಟನಿ

ತಮ್ಮ ಪುತ್ರ ಅನಿಲ್ ಬಿಜೆಪಿ ಸೇರುವ ನಿರ್ಧಾರದಿಂದ ತೀವ್ರ ನೋವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಹೇಳಿದ್ದಾರೆ.

ತನ್ನ ಮಗನ ಪ್ರತಿಸ್ಪರ್ಧಿ ಪಕ್ಷಕ್ಕೆ ಸೇರುವ ನಿರ್ಧಾರದ ಹಿನ್ನೆಲೆಯಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ನೆಹರೂ ಕುಟುಂಬಕ್ಕೆ ಬೇಷರತ್ ನಿಷ್ಠೆಯನ್ನು ಘೋಷಿಸಿದರು.

ನವದೆಹಲಿಯಲ್ಲಿ ಕೇಮದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ವಿ.ಮುರಳೀಧರನ್ ಅವರ ಸಮ್ಮುಖದಲ್ಲಿ ಅನಿಲ್ ಕೆ ಆಂಟನಿ ಬಿಜೆಪಿಗೆ ಸೇರಿದ ಕೆಲವೇ ಗಂಟೆಗಳ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆಂಟನಿ ಭಾವುಕರಾದರು. ಬಿಜೆಪಿ ಸೇರುವ ಅನಿಲ್ ಅವರ ನಿರ್ಧಾರ ತಪ್ಪು ಎಂದು ಬಣ್ಣಿಸಿದರು. ಕೊನೆಯುಸಿರು ಇರುವವರೆಗೂ ಕಾಂಗ್ರೆಸ್ಸಿಗರಾಗಿ ಮುಂದುವರೆಯುತ್ತೇನೆ ಎಂದರು.

ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆಂಟನಿ, ಬಿಜೆಪಿ ಸೇರುವ ಅನಿಲ್ ಅವರ ನಿರ್ಧಾರದಿಂದ ನನಗೆ ತೀವ್ರ ನೋವಾಗಿದೆ ಎಂದರು.

ಬಿಜೆಪಿ ಮತ್ತು ಆರ್.ಎಸ್.ಎಸ್ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರೆಸುವುದಾಗಿ ಮಾಜಿ ರಕ್ಷಣಾ ಸಚಿವ ಆಂಟನಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular