Wednesday, March 18, 2026
Google search engine
Homeಮುಖಪುಟತುಮಕೂರು ನಗರ ಕ್ಷೇತ್ರಕ್ಕೆ ಸದ್ದಿಲ್ಲದೆ ಕೇಳಿಬರುತ್ತಿದೆ ಡಾ.ಹುಲಿನಾಯ್ಕರ್ ಹೆಸರು

ತುಮಕೂರು ನಗರ ಕ್ಷೇತ್ರಕ್ಕೆ ಸದ್ದಿಲ್ಲದೆ ಕೇಳಿಬರುತ್ತಿದೆ ಡಾ.ಹುಲಿನಾಯ್ಕರ್ ಹೆಸರು

ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಇದುವರೆಗೂ ಟಿಕೆಟ್ ಯಾರಿಗೆ ಎಂಬುದನ್ನು ಘೋಷಣೆ ಮಾಡಿಲ್ಲ. ಆದರೂ ಮಾಜಿ ಸಚಿವ ಸೊಗಡು ಶಿವಣ್ಣ, ಹಾಲಿ ಶಾಸಕ ಜ್ಯೋತಿಗಣೇಶ್ ಪ್ರಚಾರದಲ್ಲಿ ತೊಡಗಿದ್ದಾರೆ. ಇವರ ನಡುವೆ ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಹೇಳುತ್ತಿದ್ದಾರೆ.

ಮಾರ್ಚ್ 27ರಂದು ಕುರುಬ ಸಮುದಾಯದವರು ಸಹ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಡಾ.ಎಂ.ಆರ್.ಹುಲಿನಾಯ್ಕರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಬೇಕು. ಎಂ.ಆರ್. ಹುಲಿನಾಯ್ಕರ್ ಹಿಂದುಳಿದ ವರ್ಗ ನಾಯಕರಾಗಿದ್ದಾರೆ. ಸರಳ, ಸಜ್ಜನ ವ್ಯಕ್ತಿಯಾಗಿದ್ದಾರೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ವ್ಯಕ್ತಿತ್ವ ಅವರದ್ದು, ಹೀಗಾಗಿ ಹುಲಿನಾಯ್ಕರ್ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಖಚಿತ ಎಂದಿದ್ದಾರೆ.

ಹುಲಿನಾಯ್ಕರ್ ಸದ್ದಿಲ್ಲದೆ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದು, ತುಮಕೂರು ನಗರ ಕ್ಷೇತ್ರಕ್ಕೆ ಟಿಕೆಟ್ ನೀಡಿದರೆ ಎಲ್ಲರೂ ನನಗೆ ಬೆಂಬಲ ನೀಡುತ್ತಾರೆ ಎಂದು ಬಿಜೆಪಿ ಮುಖಂಡರ ಬಳಿ ಹೇಳಿದ್ದಾರೆ. ಯಾವುದೇ ಅಬ್ಬರ ಆಡಂಬರವಿಲ್ಲದೆ ಸದ್ದಿಲ್ಲದೆ ತುಮಕೂರು ನಗರ ಕ್ಷೇತ್ರಕ್ಕೆ ಟಿಕೆಟ್ ತರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಹಾಲಿ ಶಾಸಕ ಜ್ಯೋತಿ ಗಣೇಶ್ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಡಾ.ಎಂ.ಆರ್. ಹುಲಿನಾಯ್ಕರ್ ಪ್ರಚಾರ ಕಾರ್ಯದಲ್ಲಿ ತೊಡಗಿಲ್ಲ. ಟಿಕೆಟ್ ನಿಕ್ಕಿಯಾದ ಮೇಲೆ ಪ್ರಚಾರ ನಡೆಸುತ್ತೇನೆ ಎಂದು ತನ್ನ ಆಪ್ತರ ಜೊತೆ ಹೇಳಿಕೊಂಡಿದ್ದಾರೆ. ಪಕ್ಷದ ಪ್ರಮುಖರಲ್ಲಿ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ತುಮಕೂರು ನಗರಕ್ಕೆ ಅಭಿವೃದ್ಧಿಗಾಗಿ ಎಂ.ಆರ್.ಹುಲಿನಾಯ್ಕರ್, ಅಧಿಕಾರಕ್ಕಾಗಿ ಅಲ್ಲ ಅಭಿವೃದ್ಧಿಗಾಗಿ ಎಂಬ ಬ್ಯಾಡ್ಜ್ಗ ಗಳನ್ನು ಹಂಚುತ್ತಾರೆ ಸದ್ದಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ ಎಂದು ಅವರ ಆಪ್ತಮೂಲಗಳು ಹೇಳಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular