ವಿಜಯಪುರ ಜಿಲ್ಲೆಯ ಸಿಂಧಗಿಯ ಐದನೇ ತರಗತಿ ವಿದ್ಯಾರ್ಥಿ ಕುಮಾರಿ ಜಿಯಾ ಪಾಕೆಟ್ ಮನಿ ರೂಪದಲ್ಲಿ ಕೂಡಿಟ್ಟಿರುವ ಐದು ಸಾವಿರ ರೂ.ಗಳನ್ನು ಚುನಾವಣಾ ಗೆಲುವಿಗಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲು ಮುಂದಾದ ಪ್ರಸಂಗ ನಡೆಯಿತು.
ಪ್ರಜಾಧ್ವನಿ ಸಮಾವೇಶದ ವೇದಿಕೆಯಲ್ಲಿ ಜಿಯಾ ಐದು ಸಾವಿರ ರೂ.ಗಳನ್ನು ನೀಡಲು ಬಂದಾಗ ಅದನ್ನು ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವಂತೆ ತಿಳಿಸಿ ಸಿದ್ದರಾಮಯ್ಯ ಅವರು ಬಾಲಕಿಗೆ ಶುಭ ಹಾರೈಸಿದರು.
ಸಿದ್ದರಾಮಯ್ಯ ಪ್ರತಿಕ್ರಿಯೆ:
ಹಣವಿಲ್ಲದೆ ಚುನಾವಣೆ ಗೆಲ್ಲುವುದೇ ಅಸಾಧ್ಯವೆಂಬ ಪರಿಸ್ಥಿತಿ ಇರುವ ಈಗಿನ ಕಾಲದಲ್ಲಿ, ನನ್ನ ಗೆಲುವಿಗೆ ಬಾಲಕಿಯೊಬ್ಬಳು ತನ್ನ ಬಳಿಯಿದ್ದ ಅಲ್ಪ ಹಣವನ್ನೇ ಕೊಡಲು ಮುಂದಾದದ್ದು ಭವಿಷ್ಯದ ರಾಜಕಾರಣದ ಬಗ್ಗೆ ಆಶಾಭಾವನೆ ಮೂಡಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇದು ನನ್ನ ರಾಜಕೀಯ ಬದುಕಿನ ಆರಂಭದ ದಿನಗಳನ್ನು ಕಣ್ಣೆದುರು ತಂದಿತು. ಹಣ ಪಡೆಯದೆ ಪ್ರೀತಿಯ ಅಪ್ಪುಗೆ ನೀಡಿ ಆ ಬಾಲಕಿಯನ್ನು ಕಳಿಸಿದೆ ಎಂದು ಹೇಳಿದ್ದಾರೆ.


