ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳ ಅಮಾನ್ಯೀಕರಣಗೊಳಿಸಿದ ಆರು ವರ್ಷಗಳ ನಂತರ ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಸೋಮವಾರ 4:1ರ ಬಹುಮತದಿಂದ ಅದನ್ನು ಎತ್ತಿಹಿಡಿದಿದೆ.
ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ರಚಿಸಿರುವ ಬಹುಮತದ ಅಭಿಪ್ರಾಯವನ್ನು ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್, ಎ.ಎಸ್ ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರು ಒಪ್ಪಿಕೊಂಡಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ನವೆಂಬರ್ 8, 2016 ರಂದು ನೋಟು ಅಮಾನ್ಯೀಕರಿಸಿರುವುದರಲ್ಲಿ ಯಾವುದೇ ನ್ಯೂನತೆ ಇಲ್ಲ ಮತ್ತು ಪ್ರಮಾಣಾನುಗೂ ಪರೀಕ್ಷೆಯನ್ನು ತೃಪ್ತಿಪಡಿಸುತ್ತದೆ ಎಂದು ತೀರ್ಪು ನೀಡಿದ್ದು, ದಾಖಲೆಯಿಂದ ಆರ್.ಬಿ.ಐ ಮತ್ತು ಕೇಂದ್ರದ ನಡುವೆ ಸಮಾಲೋಚನೆ ನಡೆದಿದೆ ಎಂದು ಅಭಿಪ್ರಾಯಪಟ್ಟಿದೆ.
ಆರ್.ಬಿ.ಐ ಕಾಯಿದೆಯ ಸೆಕ್ಷನ್ 26(2)ರ ಅಡಿಯಲ್ಲಿ ಕೇಂದ್ರಕ್ಕೆ ಲಭ್ಯವಿರುವ ಅಧಿಕಾರವನ್ನು ಕೆಲವು ಸರಣಿಯ ನೋಟುಗಳಿಗೆ ಮಾತ್ರ ಬಳಸಬಹುದಾಗಿದೆ ಮತ್ತು ಎಲ್ಲಾ ಸರಣಿಯ ನೋಟುಗಳಿಗೆ ಅಲ್ಲ ಎಂದು ಅರ್ಥೈಸಲು ನಿರ್ಬಂಧಿಸಲಾಗುವುದಿಲ್ಲ. ಕೇವಲ ಎರಡು ಹಿಂದಿನ ಸಂದರ್ಭಗಳಲ್ಲಿ ನೋಟು ಅಮಾನ್ಯೀಕರಣದ ಕಸರತ್ತು ಪೂರ್ಣ ಶಾಸನದ ಮೂಲಕ ಅಂತಹ ಅಧಿಕಾರ ಕೇಂದ್ರ ಸರ್ಕಾರಕ್ಕೆ ಲಭ್ಯವಿಲ್ಲ ಎಂದು ಹೇಳು ಸಾಧ್ಯವಿಲ್ಲ ಎಂದು ಬಹುಮತದ ತೀರ್ಪನ್ನು ಓದಿದ ನ್ಯಾಯಮೂರ್ತಿ ಗವಾಯಿ ಹೇಳಿದರು.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಅವರು ತಮ್ಮ ಭಿನ್ನಾಭಿಪ್ರಾಯವನ್ನು ಸೂಚಿಸಿದ್ದು, 8/11ರ ಅಧಿಸೂಚನೆಯ ಮೂಲಕ ಪ್ರಾರಭಿಸಲಾದ ಕೇಂದ್ರದ ಕ್ರಮವು ಕಾನೂನಿಗೆ ವಿರುದ್ಧವಾದ ಮತ್ತು ಕಾನೂನುಬಾಹಿರವಾದ ಅಧಿಕಾರದ ಕಸರತ್ತಾಗಿದೆ ಎಂದು ತೀರ್ಪು ನೀಡಿದರು. ಕೇಂದ್ರದ ಅಧಿಕಾರವು ಅಗಾಧವಾಗಿರುವುದನ್ನ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಕಾರ್ಯನಿರ್ವಾಹಕ ಕಾಯಿದೆಯ ಬದಲಿಗೆ ಪೂರ್ಣ ಶಾಸನದ ಮೂಲಕ ಚಲಾಯಿಸಬಹುದು ಎಂದು ಅವರು ತಿಳಿಸಿದರು.


