ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಬಹಳ ಹಿಂದೆಯೇ ಕೊನೆಗೊಂಡಿತು. ಆದರೆ ಕಾಂಗ್ರೆಸ್ ಮಾತ್ರ ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡಿದ್ದು, ತುಕ್ಡೆ ತುಕ್ಡೆ ಗುಂಪಿನ ನಾಯಕನಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ರಾಷ್ಷ್ರಪತಿ ಭಾಷಣಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಪ್ರಧಾನಿ ಮೋದಿ, ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರನ್ನು ಪ್ರಯಾಣಿಸಲು ಪ್ರಚೋದಿಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಾಂಕ್ರಾಮಿಕ ಹರಡುತ್ತಿದ್ದ ಸಮಯದಲ್ಲಿ ಉತ್ತರ ಪ್ರದೇಶ, ಬಿಹಾರಕ್ಕೆ ಹೋಗಲು ಮತ್ತು ಅಲ್ಲಿ ಕೊವಿಡ್ ಹರಡಲು ಮಹಾರಾಷ್ಟ್ರ ಸರ್ಕಾರ ವಲಸಿಗರಿಗೆ ಅವಕಾಶ ನೀಡಿತು ಎಂದು ಹೇಳಿದರು.
ಪ್ರತಿಪಕ್ಷಗಳು ಹಣದುಬ್ಬರದ ವಿಷಯ ಎತ್ತಿದ್ದಾರೆ. ತಮ್ಮ ಸರ್ಕಾರವು ಅಧಿಕಾರದಲ್ಲಿದ್ದಾಗ ಅವರು ಆ ವಿಷಯವನ್ನು ಪ್ರಸ್ತಾಪಿಸಿದ್ದರೆ ಉತ್ತಮವಾಗಿತ್ತು. ಸಾಂಕ್ರಾಮಿ ಸಮಯದಲ್ಲೂ ನಮ್ಮ ಸರ್ಕಾರ ಹಣದುಬ್ಬರವನ್ನು ನಿಭಾಯಿಸಲು ಪ್ರಯತ್ನಿಸಿತು. 2014-2020ರ ಅವಧಿಯಲ್ಲಿ ಹಣದುಬ್ಬರ ದರ ಶೇ.5ಕ್ಕಿಂತ ಕಡಿಮೆ ಇತ್ತು ಎಂದು ಲೋಕಸಭೆಗೆ ತಿಳಿಸಿದರು.
ನೀವು ಮೇಕ್ ಇಂಡಿಯಾ ಬಗ್ಗೆ ತಮಾಷೆ ಮಾಡಿದ್ದೀರಿ. ಆದರೆ ಈಗ ಈ ದೇಶದ ಯುವಕರು ಅದನ್ನು ಸಾಧ್ಯವಾಗಿದ್ದರೆ ನೀವು ತಮಾಷೆಯಾಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಕೆಲವರಿಗೆ ಮೇಕ್ ಇನ್ ಇಂಡಿಯಾ ಸಮಸ್ಯೆ ಇದೆ. ಏಕೆಂದರೆ ಅವರಲ್ಲಿ ಯಾವುದೇ ಭ್ರಷ್ಟಾಚಾರ ಇರುವುದಿಲ್ಲ. ಅವರು ಹಣ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ರಕ್ಷಣಾ ಕ್ಷೇತ್ರದ ಬಾಕಿ ಸಮಸ್ಯೆಗಳನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.