ಕೆಲವು ದಿನಗಳ ಹಿಂದೆ ಚೆನ್ನೈ ನಗರದ ಹೊರವಲಯದಲ್ಲಿರುವ ಮಂಗಾಡು ಎಂಬಲ್ಲಿ 11ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು ಆಕೆ ಮನಕಲುವಂತಹ ಡೆತ್ ನೋಟ್ ಬರೆದಿಟ್ಟು ಹೋಗಿದ್ದಾಳೆ.
“ಹೆಣ್ಣು ತಾಯಿಯ ಗರ್ಭ ಮತ್ತು ಸಮಾಧಿಯಲ್ಲಿ ಮಾತ್ರ ಸುರಕ್ಷಿತವಾಗಿರುತ್ತಾಳೆ” ಎಂದು ಹದಿಹರೆಯದ ಯುವತಿ ಡೆತ್ ನೋಟ್ ನಲ್ಲಿ ಬರೆದಿರುವ ಮಾತುಗಳು ಹೇಳಲಾಗದ ನೋವು ಮತ್ತು ಹತಾಶಯೆನ್ನು ಬಹಿರಂಗಪಡಿಸಿವೆ. ಈ ವಿಷಯ ಕುಟುಂಬಕ್ಕೂ ತಿಳಿದಿಲ್ಲ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ಚಿಕ್ಕ ವಯಸ್ಸಿನಲ್ಲೇ ಪ್ರಬುದ್ಧ ಮಾತುಗಳನ್ನು ಆ ಯುವತಿ ಬರೆದಿಟ್ಟು ಹೋಗಿದ್ದಾಳೆ. ಹೆಣ್ಣಿಮಕ್ಕಳಿಗೆ ಎಲ್ಲಿಯೂ ನೆಮ್ಮದಿ ಇಲ್ಲ. ಅದು ಇದ್ದರೆ ತಾಯಿ ಗರ್ಭದಲ್ಲಿ ಮತ್ತು ಸಮಾಧಿಯಲ್ಲಿ ಮಾತ್ರ ಎಂಬ ಮಾತುಗಳು ಹೆಣ್ಣುಮಕ್ಕಳು ಅನುಭವಿಸುತ್ತಿರುವ ನೋವು, ಸಂಕಟ, ಅವಮಾನವನ್ನು ಬೊಟ್ಟು ಮಾಡಿವೆ.
ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಪತ್ತೆಯಾದ ಡೆತ್ ನೋಟ್ ನಲ್ಲಿ ‘ಶಾಲೆಯು ಸುರಕ್ಷಿತವಾಗಿಲ್ಲ ಮತ್ತು ಶಿಕ್ಷಕರನ್ನು ನಂಬಲು ಸಾಧ್ಯವಿಲ್ಲ. ಮಾನಸಿಕ ಹಿಂಸೆಯಿಂದ ಓದಲು ಮತ್ತು ಮಲಗಲು ಸಹ ಆಗುತ್ತಿರಲಿಲ್ಲ’ ಎಂಬ ಮಾತುಗಳನ್ನು ಉಲ್ಲೇಖಿಸಲಾಗಿದೆ.
ಇದನ್ನು ನೋಡಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯನ್ನು ಒದಗಿಸಬೇಕು. ಹೆಣ್ಣು ಮಕ್ಕಳಿಗೆ ಆಗುತ್ತಿರುವ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಗಮನಹರಿಸುವಂತಹ, ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತಹ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ.
“ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಮತ್ತು ಪುತ್ರರಿಗೆ ಹೆಣ್ಣುಮಕ್ಕಳನ್ನು ಗೌರವದಿಂದ ಕಲಿಸಬೇಕು” ಎಂದು ಆ ವಿದ್ಯಾರ್ಥಿನಿ ಬರೆದಿದ್ದಾಳೆ. ಅಂದರೆ ಸಮಾಜದಲ್ಲಿ ಸರ್ಕಾರಗಳು, ಪೋಷಕರು ಮತ್ತು ಶಿಕ್ಷಕರು ಹೇಗೆ ಪಾತ್ರ ನಿರ್ವಹಿಸಬೇಕೆಂಬುದನ್ನು ಹೇಳಿ ಹೋಗಿದ್ದಾರೆ.
“ಲೈಂಗಿಕ ಕಿರುಕುಳ ನಿಲ್ಲಿಸಿ” ಮತ್ತು “ನನಗೆ ನ್ಯಾಯ” ಕೊಡಿಸಿಕೊಡಿ ಎಂದು ಕೊನೆಗೊಂಡ ಟಿಪ್ಪಣಿಯಲ್ಲಿ “ಸಂಬಂಧಿ, ಶಿಕ್ಷಕ, ಎಲ್ಲರೂ” ಎಂಬ ಮೂರು ಸಂಭಾವ್ಯ ಕಿರುಕುಳಗಳನ್ನು ಉಲ್ಲೇಖಿಸಲಾಗಿದೆ.
“ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಬಂಧ ಹೊಂದಿರುವುದಾಗಿ ಬಾಲಕ ಒಪ್ಪಿಕೊಂಡಿದ್ದು, ಎರಡು ವಾರಗಳಿಂದ ಆಕೆಗೆ ಕಿರುಕುಳ ನೀಡಿ ಚಿತ್ರಹಿಂಸೆ ನೀಡುತ್ತಿದ್ದನು. ಹೊಲಸು ಸಂದೇಶಗಳು ಮತ್ತು ಛಾಯಾಚಿತ್ರಗಳ ವಿನಿಮಯ ಮಾಡಿರುವುದನ್ನು ಪೊಲೀಸ ಇಲಾಖೆ ಪತ್ತೆ ಮಾಡಿದೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.


