Wednesday, March 4, 2026
Google search engine
Homeಮುಖಪುಟಪಂಜಾಬ್ : ಸಿಎಂ ಚನ್ನಿ ವಿರುದ್ಧ ಸಿಧು ಉಪವಾಸ

ಪಂಜಾಬ್ : ಸಿಎಂ ಚನ್ನಿ ವಿರುದ್ಧ ಸಿಧು ಉಪವಾಸ

ಪಂಜಾಬ್ ಹೈಕೋರ್ಟ್ ಗೆ ಡ್ರಗ್ಸ್ ಹಾವಳಿ ಮತ್ತು ಹತ್ಯೆ ಪ್ರಕರಣಗಳ ಸಂಬಂಧ ಸಲ್ಲಿಸಿರುವ ವರದಿಗಳನ್ನು ಬಹಿರಂಗಗೊಳಿಸಬೇಕು ಎಂದು ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಘೋಷಿಸಿದ್ದಾರೆ.

ಡ್ರಗ್ಸ್ ಸಮಸ್ಯೆಯ ಕುರಿತು ರಾಜ್ಯ ಏಜೆನ್ಸಿಗಳ ವರದಿಗಳನ್ನು ಹೈಕೋರ್ಟ್ ಗೆ ಸಲ್ಲಿಸಲಾಗಿದೆ. ಈ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರ ಔಷಧಿ ವರದಿಗಳನ್ನು ಬಹಿರಂಗಗೊಳಿಸದಿದ್ದರೆ ನಾನು ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಹಿಂದಿನ ಮುಖ್ಯಮಂತ್ರಿ ಈ ವರದಿಗಳ ಕುರಿತು ಹೇಗೆ ನೋಡಿದರು ಎಂಬುದನ್ನು ನಾವು ತೋರಿಸಬೇಕಾಗುತ್ತದೆ. ಹೀಗಾಗಿ ಡ್ರಗ್ಸ್ ಸಂಬಂಧಿಸಿದ ವರದಿಗಳನ್ನು ಬಹಿರಂಗಗೊಳಿಸಲು ನ್ಯಾಯಾಲಯ ಸರ್ಕಾರಕ್ಕೆ ನಿರ್ಬಂಧ ಹೇರಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಅಮರಿಂದರ್ ಸಿಂಗ್ ರಾಜಿನಾಮೆಯ ನಂತರ ಮುಖ್ಯಮಂತ್ರಿ ಹುದ್ದೆಗೆ ಚನ್ನಿ ಅವರನ್ನು ಆಯ್ಕೆ ಮಾಡಲಾಯಿತು. ಇದು ಸಿಧು ಅವರ ಉನ್ನತ ಹುದ್ದೆಯ ಆಕಾಂಕ್ಷೆಗೆ ಪೆಟ್ಟು ನೀಡಿತ್ತು. ಹೀಗಾಗಿ ಸಿಧು ರಾಜ್ಯ ಸರ್ಕಾರದ ವಿರುದ್ಧ ಡ್ರಗ್ಸ್ ಮತ್ತು ಇತರೆ ವಿಷಯದಲ್ಲಿ ಒತ್ತಡ ಹಾಕುತ್ತಲೇ ಇದ್ದಾರೆ.

ಚನ್ನಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕ್ಯಾಬಿನೆಟ್, ರಾಜ್ಯ ಪೊಲೀಸ್ ಮುಖ್ಯಸ್ಥ ಮತ್ತು ಅಡ್ವೋಕೇಟ್ ಜನರಲ್ ಆಯ್ಕೆಯ ಬಗ್ಗೆ ಸಿಧು ಅಸಮಾಧಾನ ವ್ಯಕ್ತಪಡಿಸಿದರು. ಸಿಧು ಸಿಟ್ಟಿಗೆ ಮಣಿದ ಚನ್ನಿ ಅಡ್ವೋಕೇಟ್ ಜನರಲ್ ಅವರನ್ನು ಬದಲಾವಣೆ ಮಾಡಿದರು. ಆದರೂ ಸಿಧು ಕೋಪ ತಣ್ಣಗಾಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular