Thursday, January 29, 2026
Google search engine
Homeಮುಖಪುಟರಾಜಸ್ಥಾನ : ಗೆಹ್ಲೋಟ್ ಸಂಪುಟಕ್ಕೆ ಪೈಲಟ್ ಬೆಂಬಲಿಗರ ಸೇರ್ಪಡೆ - ಭಿನ್ನಮತ ಶಮನ

ರಾಜಸ್ಥಾನ : ಗೆಹ್ಲೋಟ್ ಸಂಪುಟಕ್ಕೆ ಪೈಲಟ್ ಬೆಂಬಲಿಗರ ಸೇರ್ಪಡೆ – ಭಿನ್ನಮತ ಶಮನ

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ದ ಬಂಡಾಯ ಎದ್ದಿದ್ದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಬೆಂಬಲಿಗರಿಗೆ ಗೆಹ್ಲೋಟ್ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ. ಇದರಿಂದ ರಾಜಸ್ಥಾನ ಕಾಂಗ್ರೆಸ್ ನಲ್ಲಿನ ಬಂಡಾಯ ಶಮನಗೊಂಡಂತಾಗಿದೆ.

ಪೈಲಟ್ ನಿಷ್ಠರಾದ ರಮೇಶ್ ಮೀನಾ, ವಿಶ್ವೇಂದ್ರ ಸಿಂಗ್, ಬ್ರಿಜೇಂದ್ರ ಸಿಂಗ್ ಓಲಾ, ಹೇಮರಾಮ್ ಚೌಧರಿ ಮತ್ತು ಮುರಾರಿ ಲಾಲ್ ಮೀನಾ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಇಂದು 15 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಗೆ ನಿಷ್ಠರಾಗಿರುವ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಿದ್ದು ಬಣ ರಾಜಕೀಯಕ್ಕೆ ಕಡಿವಾಣ ಹಾಕಲಾಗಿದೆ. ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದ್ದು 2023ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ವಿಶ್ಲೇಷಣೆಗಳು ನಡೆಯುತ್ತಿವೆ.

ಗೆಹ್ಲೋಟ್ ಸಂಪುಟಕ್ಕೆ 15 ಹೊಸ ಹೆಸರುಗಳನ್ನು ಘೋಷಿಸಲಾಗಿದೆ. 11 ಮಂದಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಮತ್ತು ಉಳಿದವರು ರಾಜ್ಯ ಸಚಿವರಾಗಿ ಸೇರ್ಪಡೆಯಾಗಲಿದ್ದಾರೆ.

ಹೇಮರಾಜ್ ಚೌಧರಿ, ಮಹೇಂದ್ರಜೀತ್ ಸಿಂಗ್ ಮಾಳವಿಯ, ರಾಮಲಾಲ್ ಜಾಟ್, ಮಹೇಶ್ ಜೋಶಿ, ವಿಶ್ವೇಂದ್ರ ಸಿಂಗ್, ರಮೇಶ್ ಮೀನಾ, ಮಮತ ಭೂಪೇಶ್ ಬೈರ್ವಾ, ಭಜನ್ ಲಾಲ್ ಜಾತವ್, ಟಿಕಾರಾಂ ಜುಲ್ಲಿ, ಗೋವಿಂದ್ ರಾಮ್ ಮೇಘವಾಲ್ ಮತ್ತು ಶಕುಂತಲಾ ರಾವತ್ ನೂತನ ಕ್ಯಾಬಿನೆಟ್ ಸಚಿವರಾಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular