Tuesday, March 3, 2026
Google search engine
Homeಮುಖಪುಟಉಗ್ರರ ದಾಳಿ - ಕಮಾಂಡೆಂಟ್ ಸೇರಿ ಐವರು ಯೋಧರ ಹತ್ಯೆ

ಉಗ್ರರ ದಾಳಿ – ಕಮಾಂಡೆಂಟ್ ಸೇರಿ ಐವರು ಯೋಧರ ಹತ್ಯೆ

ಮಣಿಪುರದಲ್ಲಿ ಉಗ್ರರು ನಡೆಸಿದ ಹೊಂಚು ದಾಳಿಯಲ್ಲಿ ಅಸ್ಪಾಂ ರೈಫಲ್ಸ್ ಕಮಾಂಡೆಂಟ್, ಅವರ ಕುಟುಂಬದ ಇಬ್ಬರು ಸದಸ್ಯರು ಮತ್ತು ಇತರೆ ನಾಲ್ವರು ಹತ್ಯೆಯಾಗಿದ್ದಾರೆ.

ಮಣಿಪುರದ ಚುರಾಚಂದ್ ಪುರ ಜಿಲ್ಲೆಯ ಸಿಂಘತ್ ಉಪವಿಭಾಗದಲ್ಲಿ ಶನಿವಾರು ಉಗ್ರರು ಹೊಂಚುಹಾಕಿ ಈ ಕೃತ್ಯ ಎಸಗಿದ್ದಾರೆ.

ಉಗ್ರರ ದಾಳಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದಾರೆ. ಅಸ್ಸಾಂ ರೈಫಲ್ಸ್ ಬೆಂಗಾವಲು ಪಡೆಯ ಮೇಲೆ ನಡೆದ ದಾಳಿ ಹೇಡಿತನದ ಕೃತ್ಯ. ಇದು ನೋವಿನ ಸಂಗತಿ.

ದೇಶ ಓರ್ವ ಕಮಾಂಡೆಂಟ್ ಮತ್ತು ಆತನ ಕುಟುಂಬದ ಇಬ್ಬರು ಸದಸ್ಯರು ಒಳಗೊಂಡಂತೆ ಐವರು ವೀರ ಯೋಧರನ್ನು ಕಳೆದುಕೊಂಡಿದೆ. ಅಪರಾಧಿಗಳಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಮಣಿಪುರ ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ಇಂದು ಸಿಸಿಪುರದಲ್ಲಿ ಸಿಒ ಮತ್ತು ಅವರ ಕುಟುಂಬದ ಸದಸ್ಯರು ಸೇರಿ ಕೆಲ ಸಿಬ್ಬಂದಿಯನ್ನು ಕೊಂದಿರುವುದು ಹೇಡಿತನ ಕೃತ್ಯ. ಇದನ್ನು ಬಲವಾಗಿ ಖಂಡಿಸುತ್ತೇನೆ. ಉಗ್ರರನ್ನು ಪತ್ತೆಹಚ್ಚಲು ಪಡೆಗಳು ಕಾರ್ಯಾಚರಣೆ ನಡೆಸಿವೆ. ಅಪರಾಧಿಗಳನ್ನು ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸಲಾಗುವುದು ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular