Saturday, October 19, 2024
Google search engine
Homeಮುಖಪುಟಬಿಜೆಪಿಯನ್ನು ಅರಿಯದಿರುವುದೇ ರಾಹುಲ್ ಸಮಸ್ಯೆ - ಪ್ರಶಾಂತ್ ಕಿಶೋರ್

ಬಿಜೆಪಿಯನ್ನು ಅರಿಯದಿರುವುದೇ ರಾಹುಲ್ ಸಮಸ್ಯೆ – ಪ್ರಶಾಂತ್ ಕಿಶೋರ್

ಬಿಜೆಪಿ ಹಲವು ವರ್ಷಗಳಿಂದ ಎಲ್ಲಿಯೂ ಹೋಗುತ್ತಿಲ್ಲ. ಆದರೆ ರಾಹುಲ್ ಗಾಂಧಿ ಅವರು ಇದನ್ನು ಅರಿತುಕೊಳ್ಳದಿರುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಗೋವಾದಲ್ಲಿ ಹೇಳಿದ್ದಾರೆ.

ಬಿಜೆಪಿ ಭಾರತದ ರಾಜಕೀಯದ ಕೇಂದ್ರವಾಗಲಿದೆ. ಅವರು ಗೆದ್ದರೂ, ಸೋತರೂ ಕಾಂಗ್ರೆಸ್ ಗೆ ಮೊದಲ 40 ವರ್ಷಗಳಂತೆ ಬಿಜೆಪಿ ಎಲ್ಲಿಯೂ ಹೊಗುತ್ತಿಲ್ಲ. ಒಮ್ಮೆ ದೇಶದಲ್ಲಿ ಶೇ.30ಕ್ಕೂ ಹೆಚ್ಚಿನ ಮತಗಳನ್ನು ಪಡೆದುಕೊಂಡರೆ ಆತುರದಿಂದ ದೂರ ಹೋಗುವುದಿಲ್ಲ. ಆದ್ದರಿಂದ ಜನರು ಕೋಪಗೊಳ್ಳುತ್ತಾರೆ. ಮೋದಿ ಅವರನ್ನು ಅಧಿಕಾರದಿಂದ ಇಳಿಸುತ್ತಾರೆ ಎಂಬ ಬಲೆಗೆ ಎಂದಿಗೂ ಸಿಲುಕಬೇಡಿ ಎಂದು ಸಲಹೆ ನೀಡಿದ್ದಾರೆ.

ಬಹುಶಃ ಮೋದಿಯವರನ್ನು ಎಸೆಯಬಹುದು. ಆದರೆ ಬಿಜೆಪಿ ಎಲ್ಲಿಯೂ ಹೋಗುವುದಿಲ್ಲ. ಅವರು ಇಲ್ಲೇ ಇರಲಿದ್ದಾಋಎ. ಮುಂದಿನ ಹಲವು ದಶಕಗಳವರೆಗೆ ಅವರು ಹೋರಾಟ ನಡೆಸಲಿದ್ದು ಅವಸರದಲ್ಲಿ ಹೋಗುವುದಿಲ್ಲ ಎಂದು ಕಿಶೋರ್ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ರಾಹುಲ್ ಗಾಂಧಿ ಅವರಿಗೆ ಅಲ್ಲಿಯೇ ಸಮಸ್ಯೆ ಇರುವುದು. ಜನರು ಮೋದಿಯನ್ನು ಗೆಲ್ಲಿಸುವುದಿಲ್ಲ ಎಂದು ರಾಹುಲ್ ಭಾವಿಸುತ್ತಾರೆ. ಅದು ನಡೆಯುತ್ತಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಲಖಿಂಪುರ ಖೇರಿಯಲ್ಲಿ ಹತ್ಯೆಯಾದ ರೈತರ ಕುಟುಂಬಗಳನ್ನು ಭೇಟಿ ಮಾಡಲು ಸಾಕಷ್ಟು ಕಸರಸ್ತು ನಡೆಸಿದರು. ಭೇಟಿಯೂ ಆದರು. ಎಚ್ಚರಿಕೆ ನೀಡಲು ಪ್ರಯತ್ನಿಸಿದರು. ಇದು ತ್ವರಿತ ಕ್ರಮವಾದರೂ ಏನೂ ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular