Thursday, March 5, 2026
Google search engine
Homeಮುಖಪುಟಪೂಂಚ್ ನಲ್ಲಿ ಮುಂದುವರಿದ ಕಾರ್ಯಾಚರಣೆ - ಹುತಾತ್ಮ ಸೈನಿಕರ ಸಂಖ್ಯೆ 9ಕ್ಕೆ ಏರಿಕೆ

ಪೂಂಚ್ ನಲ್ಲಿ ಮುಂದುವರಿದ ಕಾರ್ಯಾಚರಣೆ – ಹುತಾತ್ಮ ಸೈನಿಕರ ಸಂಖ್ಯೆ 9ಕ್ಕೆ ಏರಿಕೆ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿರುವ ಉಗ್ರರ ವಿರುದ್ಧದ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಸೈನಿಕರ ಸಂಖ್ಯೆ 9ಕ್ಕೆ ಏರಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಭದ್ರತಾ ಪಡೆಗಳು ಶೋಧ ಕಾರ್ಯ ಮುಂದುವರಿಸಿವೆ. ಆದರೂ ಇದುವರೆಗೆ ಉಗ್ರರು ಪತ್ತೆ ಆಗಿಲ್ಲ. ಉಗ್ರರು ಗುಂಡು ಹಾರಿಸಿದ್ದರಿಂದ ವಿಕ್ರಂ ಸಿಂಗ್ ನೇಗಿ, ಯೋಗಂಬರ್ ಸಿಂಗ್ ಮೃತ ದೇಹಗಳನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ.

ಸುಬೇದಾರ್ ಅಜಯ್ ಸಿಂಗ್ ಮತ್ತು ನಾಯಕ್ ಹರೇಂದ್ರ ಸಿಂಗ್ ಅವರ ಮೃತದೇಹಗಳು ಶನಿವಾರ ಸಂಜೆ ಮೆಂಧಾರ್ ಪ್ರದೇಶದ ನರಖಾನ್ ಅರಣ್ಯದಲ್ಲಿ ಪತ್ತೆಯಾಗಿದೆ.

ಬಿಂಬರ್ ಗಾಲಿ-ಸುರಂಕೋಟೆ ರಸ್ತೆಯಲ್ಲಿರುವ ಭಟ ದುರಿಯನ್ ಗ್ರಾಮ ಸಮೀಪದ ಕಾಡಿನಲ್ಲಿ ಗುರುವಾರ ಸಂಜೆ ಉಗ್ರರೊಂದಿಗೆ ನಡೆದ ಭೀಕರ ಗುಂಡಿನ ಚಕವಕಿಯಿಂದ ನಾಲ್ವರು ಭದ್ರತಾ ಪಡೆಯ ಸಿಬ್ಬಂದಿ ನಾಪತ್ತೆಯಾಗಿದ್ದರು.

ಶನಿವಾರ ಪತ್ತೆಯಾದ ಶವಗಳನ್ನು ಸುಬೇದಾರ್ ಅಜಯ್ ಸಿಂಗ್ ಮತ್ತು ನಾಯಕ್ ಹರೇಂದ್ರ ಸಿಂಗ್ ಅವರದ್ದು ಎಂದು ಗುರುತಿಸಲಾಗಿದೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕರ್ನಲ್ ದೇವೆಂದರ್ ಆನಂದ್ ತಿಳಿಸಿದ್ದಾರೆ.

ಇದು ಕಾಡಿನಲ್ಲಿ ಅಡಗಿರುವ ಉಗ್ರರನ್ನು ಹೊರಹಾಕಲು ಭದ್ರತಾ ಪಡೆಗಳು ಆರಂಭಿಸಿದ ಶೋಧ ಕಾರ್ಯಾಚರಣೆಯ ಭಾಗವಾಗಿದೆ ಎಂದು ಅವರು ಹೇಳಿದರು.

ಉಗ್ರರ ಚಟುವಟಿಕೆಗಳನ್ನು ತಟಸ್ಥಗೊಳಿಸಲು ಮತ್ತು ಸೈನಿಕರೊಂದಿಗೆ ಸಂವಹನವನ್ನು ಪುನಃಸ್ಥಾಪಿಸಲು ಪಟ್ಟುಬಿಡದೆ ಕಾರ್ಯಾಚರಣೆ ಮುಂದುವರಿದಿವೆ. ಸುಬೇದಾರ್ ಅಜಯ್ ಸಿಂಗ್ ಮತ್ತು ನಾಯಕ್ ಹರೇಂದ್ರ ಸಿಂಗ್ ಭೀಕರ ಹೋರಾಟದಲ್ಲಿ ಹತ್ಯೆಯಾಗಿದ್ದಾರೆ ಮತ್ತು ಅವರ ಶವಗಳನ್ನು ಶನಿವಾರ ಸಂಜೆ ಪಡೆಯಲಾಗಿದೆ ಎಂದು ಹೇಳಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಎಸ್ ವರದಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular