Thursday, March 5, 2026
Google search engine
Homeಮುಖಪುಟಪರಿಹಾರ ನೀಡದ ಬುರುಡೆ ಸರ್ಕಾರ-ಸಿದ್ದರಾಮಯ್ಯ

ಪರಿಹಾರ ನೀಡದ ಬುರುಡೆ ಸರ್ಕಾರ-ಸಿದ್ದರಾಮಯ್ಯ

ಮಡಿವಾಳರು, ಕ್ಷೌರಿಕರು, ಆಟೋಚಾಲಕರು, ಟೈಲರ್, ನೇಕಾರರು, ಮನೆಕೆಲಸದವರು, ತರಕಾರಿ ವ್ಯಾಪಾರಿಗಳಿಗೆ ಕೊವಿಡ್ ಪರಿಹಾರ ನೀಡುವುದಾಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸಲೇ ಇಲ್ಲ. ಬೊಮ್ಮಾಯಿ ಸರ್ಕಾರವೂ ಪರಿಹಾರ ಕಡ್ತೀವಿ ಅಂದು ಕೊಡ್ಲೇ ಇಲ್ಲ. ಹಾಗಾಗಿ ಇದು ಬರೀ ಬರುಡೆ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಹಾನಗಲ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೊರೊನದಿಂದ ಮೃತರಾದ ಕುಟುಂಬದವರಿಗೆ ಒಂದು ಲಕ್ಷ ಕೊಡುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದರು. ಈ ಭರವಸೆಯನ್ನೂ ಬೊಮ್ಮಾಯಿ ಸರ್ಕಾರ ಈಡೇರಿಸಲೇ ಇಲ್ಲ. ಕೊರೊನ ಸಮಯದಲ್ಲಿ ಸಂಕಷ್ಟದಲ್ಲಿರುವ ಬಿಪಿಎಲ್ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ನೀಡಿ ಎಂದು ಒತ್ತಾಯಿಸಿದೆ. ಆದರೆ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ಟೀಕಿಸಿದರು.

ನಮ್ಮ ಸರ್ಕಾರ ಇದ್ದಿದ್ದರೆ ಬಿಪಿಎಲ್ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ನೀಡುತ್ತಿದ್ದೆವು. ರಾಜ್ಯದ ಒಂದು ಕೋಟಿ ಕುಟುಂಬಗಳಿಗೆ 10 ಸಾವಿರದಂತೆ ನೀಡಿದ್ದರೆ 10 ಸಾವಿರ ಕೋಟಿ ರೂಪಾಯಿ ಆಗುತ್ತಿತ್ತು. ಆದರೆ ಯಡಿಯೂರಪ್ಪ ನಮ್ಮಲ್ಲಿ ದುಡ್ಡಿಲ್ಲ ಅಂದರು. ಜನರ ತೆರಿಗೆ ಹಣವನ್ನು ಜನರಿಗೆ ನೀಡಬಹುದಿತ್ತು. ಕೆರೆಯ ನೀರನ್ನು ಕೆರೆಗೆ ಚಲ್ಲಿದಂತೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನಾನೂ ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎನ್ನುತ್ತಾರೆ. ಹಾನಗಲ್ ನ ಸಜ್ಜನ ಚೀಲವನ್ನೂ ಮಾರಿಕೊಂಡರು. ಗುಡ್ಡವನ್ನೂ ನುಂಗಿದರು. ಆದರೆ ಸಜ್ಜನ ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಸಹಕಾರ ಕಾಯ್ದೆ 64ರಡಿ ತನಿಖೆ ನಡೆಯುತ್ತಿದೆ. ಇಂಥವರಿಗೆ ಮತಹಾಬೇಕೇ ಎಂದು ಸಭಿಕರನ್ನು ಪ್ರಶ್ನಿಸಿದರು.

ಅಚ್ಚೇ ದಿನ್ ಆಯೇಗಾ ಅಂದ್ರು, ಬಂತಾ? ಪೆಟ್ರೋಲ್, ಡೀಸೆಲ್, ಗ್ಯಾಸ್, ಸೀಮೆಂಟ್, ಕಬ್ಬಿಣ, ತರಕಾರಿ, ದಿನಸಿ, ಅಡುಗೆಎಣ್ಣೆ, ಗೊಬ್ಬರ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೂ ಮೋದಿ ಮಾತನಾಡುತ್ತಿಲ್ಲ. ರೈತರ ಸಮಸ್ಯೆಯನ್ನು ಕೇಳೋರೇ ಇಲ್ಲ. 10 ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೋದಿ ಕ್ಯಾರೆ ಅನ್ನುತ್ತಿಲ್ಲ ಎಂದು ಟೀಕಾಪ್ರಹಾಋ ನಡೆಸಿದರು.

ಪ್ರತಿಭಟನಾನಿರತ ರೈತರ ಮೇಲೆ ಸಚಿವರ ಪುತ್ರ ಕಾರುಹತ್ತಿಸಿ ಕೊಲ್ಲುತ್ತಾನೆ. ಇದೊಂದು ಕೊಲೆಗಡುಕರ ಸರ್ಕಾರ, ಲಜ್ಜೆಗೆಟ್ಟ, ಮಾನಗೆಟ್ಟ ಸರ್ಕಾರ. ರೈತರು, ದಲಿತರು, ಮಹಿಳೆಯರು, ಸಾಮಾನ್ಯರ ನೆರವಿಗೆ ಬಾರದ ಮೋದಿ ಸರ್ಕಾರಕ್ಕೆ ಓಟು ಆಕಬೇಕಾ? ನಿಮ್ಮ ಸಿಟ್ಟನ್ನು ಮತ ನೀಡುವ ಮೂಲಕ ತೀರಿಸಿಕೊಳ್ಳಬೇಕು. ಬಿಜೆಪಿ ಸರ್ಕಾರಕ್ಕೆ ಬುದ್ದಿ ಕಲಿಸಬೇಕು ಎಂದು ಹೇಳಿದರು.

ನರೇಂದ್ರ ಮೋದಿ ಅವರಿಗೆ 56 ಇಂಚು ಎದೆ ಇದೆ. ಆದರೆ ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಹಾಗಿದ್ದ ಮೇಲೆ 56 ಇಂಚಿನ ಎದೆ ಇದ್ದರೆ ಪ್ರಯೋಜನ ಏನು? ನಾಯಕರಿಗೆ ಮಾತೃಹೃಯ ಇರಬೇಕು. ರೈತರು, ಬಡವರು ಬಗ್ಗೆ ಮಾತೃಹೃದಯ ಸ್ಪಂದಿಸಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತೃಹೃದಯವೇ ಇಲ್ಲ. ಇದು ಬಡವರು, ರೈತರು, ಹಿಂದುಳಿದವರ ವಿರೋಧಿ ಸರ್ಕಾರ. ಕಾರ್ಮಿಕ ದ್ರೋಹಿ ಸರ್ಕಾರ ಎಂದು ಜರೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular