ಕಾಶ್ಮೀರದಲ್ಲಿ ಅಮಾಯಕ ನಾಗರಿಕರನ್ನು ಹತ್ಯೆ ಮಾಡುತ್ತಿರುವ ಜಿಹಾದಿ ಹಿಂಸಾಚಾರವನ್ನು ದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಟೀಚರ್ಸ್ ಫೋರಂ ತೀವ್ರವಾಗಿ ಖಂಡಿಸಿದೆ. ಹೇಡಿ ಉಗ್ರರು ಮುಗ್ದರನ್ನು ಬಲಿತೆಗೆದುಕೊಳ್ಳುತ್ತಿದ್ದು ಹಿಂಸಾಚಾರ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಉಗ್ರರ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತಿರುವ ಕುಟುಂಬಗಳಿಗೆ ಬೆಂಬಲ ನೀಡುತ್ತೇವೆ ಎಂದು ಪತ್ರದಲ್ಲಿ ತಿಳಿಸಿದೆ.
ಶ್ರೀನಗರದ ಹೊರವಲಯದಲ್ಲಿ ಉಗ್ರರಿಂದ ಇಬ್ಬರು ಶಿಕ್ಷಕರು ಹತ್ಯೆಯಾಗಿದ್ದರು. ಬಾಲಕರ ಸರ್ಕಾರಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಸುಪಿಂದ್ ಕೌರ ಮತ್ತು ಶಿಕ್ಷಕ ದೀಪಕ್ ಚಂದ್ ಉಗ್ರರಿಂದ ಹತ್ಯೆಯಾಗಿದ್ದರು. ಇದನ್ನು ಜೆಎನ್.ಯುಟಿಎಫ್ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದೆ.
ಮಂಗಳವಾರ ಕಾಶ್ಮೀರ ಪಂಡಿತ ಮುಖನ್ ಲಾಲ್ ಬಿಂದ್ರೂ ಹತ್ಯೆಯಾಗಿದ್ದರು. ವ್ಯಾಪಾರಿಯಾಗಿದ್ದ ಬಿಂದ್ರೂ ಶಾಂತಿಯುತವಾಗಿ ಎಲ್ಲರೊಂದಿಗೂ ವ್ಯವಹರಿಸುತ್ತಿದ್ದರು. ದೇಶ ಸೇವೆಯಲ್ಲೂ ತೊಡಗಿಕೊಂಡಿದ್ದರು. ಇದರ ಜೊತೆ ಬೀದಿಬದಿ ವ್ಯಾಪಾರಿ ವೀರೇಂದ್ರ ಪಾಸ್ವಾನ್ ಹವಾಲ್ ನಲ್ಲಿ ಕೊಲೆಯಾಗಿದ್ದರು. ಇದನ್ನು ಟೀಚರ್ ಫೋರಂ ಖಂಡಿಸಿದೆ.
ಪಾಸ್ವಾನ್ ಬಿಹಾರದಿಂದ ವಲಸೆ ಬಂದಿದ್ದ ಕಾರ್ಮಿಕನಾಗಿದ್ದರು. ಬದುಕು ಕಟ್ಟಿಕೊಳ್ಳಲು ಹವಾಲ್ ಗೆ ಬಂದು ಬೀದಿಬದಿ ವ್ಯಾಪಾರ ಮಾಡುತ್ತಿದ್ದ. ಅಲ್ಲದೆ ಬಂಡಿಪುರದ ಶಗುಂದ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮೊಹಮದ್ ಶಫಿ ಲೋನ್ ಕೂಡ ಉಗ್ರರಿಂದ ಹತರಾಗಿದ್ದಾರೆ. ಇಂತಹ ಅಮಾಯಕರನ್ನು ಜಿಹಾದಿ ಉಗ್ರರು ಕೊಲೆಗೈದಿರುವುದು ಖಂಡನೀಯ ಎಂದು ಪತ್ರದಲ್ಲಿ ಹೇಳಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯುವಪೀಳಿಗೆಯ ಭವಿಷ್ಯವನ್ನು ರೂಪಿಸಲು ಮಹಿಳಾ ಶಿಕ್ಷಕಿಯರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನಾವು ಗಮನಿಸುತ್ತೇವೆ. ಸಿಖ್ ಪ್ರಾಂಶುಪಾಲರು ವಿಶೇಷ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಬಿಹಾರದಿಂದ ವಲಸೆ ಬಂದ ದಲಿತ ಕೆಲಸಗಾರ ಜಿಹಾದಿ ಶಕ್ತಿಗಳಿಂದ ಮೌನವಹಿಸುವಂತೆ ಆಗಿದೆ ಎಂದು ಟೀಚರ್ ಫೋರಂ ತಿಳಿಸಿದೆ.
ಮುಗ್ದ ಜನರು ಕಣಿವೆಯಲ್ಲಿ ವ್ಯಾಪಕ ಹಿಂಸೆಗೆ ಒಳಗಾಗುತ್ತಿರುವುದನ್ನು ನೋಡಿ ನಮಗೆ ಅತ್ಯಂತ ನೋವು ತಂದಿದೆ. ರಾಜ್ಯ ಮತ್ತು ಭಾರತ ಸರ್ಕಾರವು ಕಣಿವೆಯಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಮೊದಲಿನಂತೆ ಸಹಜತೆ ಪುನರ್ ಸ್ಥಾಪಿಸಲು ಎಲ್ಲವನ್ನು ಸಾಮರ್ಥ್ಯದಿಂದ ಮಾಡಬೇಕು ಎಂದು ಆಗ್ರಹಿಸಿದೆ.
ನಾವು ಕಾಶ್ಮೀರದ ನಿರ್ಭೀತ ದೇಶಭಕ್ತರೊಂದಿಗೆ ನಿಂತಿದ್ದೇವೆ ಮತ್ತು ಕಾಶ್ಮೀರದ ಮುಗ್ದ ಜನರಿಗೆ ತಮ್ಮ ಸಹಾನುಭೂತಿಯನ್ನು ವಿಸ್ತರಿಸುವಂತೆ ಭಾರತದ ಜನರಿಗೆ ಮನವಿ ಮಾಡುತ್ತೇವೆ. ಭಾರತದ ಚೈತನ್ಯಶಕ್ತಿಯು ಅಂತಿಮವಾಗಿ ಭೂಮಿಯ ಮೇಲಿನ ಸ್ವರ್ಗಕ್ಕೆ ಶಾಶ್ವತವಾದ ಶಾಂತಿಯನ್ನು ಹೊಂದುವ ತಮ್ಮ ಕೈಹಿಡಿಯುವವರ ಆದೇಶದ ಮೇರೆಗೆ ಕಾರ್ಯ ನಿರ್ವಹಿಸುವ ಎಲ್ಲಾ ಏಜೆಂಟರನ್ನು ತಟಸ್ಥಗೊಳಿಸುತ್ತದೆ ಎಂದು ನಮಗೆ ತಿಳಿದಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.


