Tuesday, March 3, 2026
Google search engine
Homeಮುಖಪುಟಸಿಧುಗೆ ಸಿಎಂ ಸ್ಥಾನ ತಪ್ಪಿಸಲು ಯಾವ ತ್ಯಾಗಕ್ಕೂ ಸಿದ್ದ - ಅಮರಿಂದರ್ ಸಿಂಗ್ ಗುಡುಗು

ಸಿಧುಗೆ ಸಿಎಂ ಸ್ಥಾನ ತಪ್ಪಿಸಲು ಯಾವ ತ್ಯಾಗಕ್ಕೂ ಸಿದ್ದ – ಅಮರಿಂದರ್ ಸಿಂಗ್ ಗುಡುಗು

ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ನವಜೋತ್ ಸಿಂಗ್ ಸಿಧು ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸಿಧುಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಯಾವ ತ್ಯಾಗಕ್ಕೂ ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗುಡುಗಿದ್ದಾರೆ.

ಹಲವು ಮಾಧ್ಯಮಗಳಿಗೆ ನೀಡಿದ ಸಂದರ್ಶದಲ್ಲಿ ಮಾತನಾಡಿರುವ ಅರಮರಿಂದರ್ ಸಿಂಗ್ “ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ರಾಜಕೀಯ ಅನುಭವ ಇಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.

“ನನಗೆ ಯಾವುದೇ ಮಾಹಿತಿ ನೀಡದೆ ತುರ್ತಾಗಿ ಶಾಸಕರ ಸಭೆ ಕರೆದು ಪಕ್ಷ ತೀರ್ಮಾನ ಕೈಗೊಂಡಿದ್ದರಿಂದ ನನಗೆ ಅವಮಾನವಾಗಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ನವಜೋತ್ ಸಿಂಗ್ ಸಿದ್ದು ಮುಖ್ಯಮಂತ್ರಿ ಆಗುವುದನ್ನ ತಪ್ಪಿಸಲು ಮತ್ತು ಇಂತಹ ಅಪಾಯಕಾರಿ ವ್ಯಕ್ತಿಯಿಂದ ದೇಶವನ್ನು ಉಳಿಸಲು ಯಾವುದೇ ತ್ಯಾಗಕ್ಕೂ ಸಿದ್ದ ಎಂದು ಶಪಥ ಮಾಡಿದ್ದಾರೆ.

2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸಿಧು ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇನೆ. ಸಿಧು ಅವರನ್ನು ಸೋಲಿಸುತ್ತೇನೆ. ಅವರು ರಾಜ್ಯಕ್ಕೆ ಅಪಾಯಕಾರಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

79 ವರ್ಷದ ಅಮರಿಂದರ್ ಸಿಂಗ್ “ರಾಜಕೀಯ ಅವಕಾಶ ಮುಕ್ತವಾಗಿದೆ. ಭವಿಷ್ಯದ ನಿರ್ಧಾರ ತೆಗೆದುಕೊಳ್ಳುವ ಮೊದಲು ನನ್ನ ಸ್ಹೇಹಿತರ ಜೊತೆ ಮಾತನಾಡುತ್ತೇನೆ. ಚುನಾವಣೆಯಲ್ಲಿ ನನ್ನ ಗೆಲುವಿನ ನಂತರ ಪಕ್ಷ ತೊರೆಯುತ್ತೇನೆ. ಸೋಲುವುದರಿಂದ ಅಲ್ಲ ಎಂದು ಹೇಳಿದ್ದಾರೆ.

ಸೋನಿಯಾ ಗಾಂದಿ ಕರೆ ಮಾಡಿದರು. ರಾಜಿನಾಮೆ ನೀಡಬೇಕೆಂದು ಕೇಳಿದರು. ನಾನು ಅದನ್ನು ಮಾಡಿದೆ. ನಾನು ಸೈನಿಕ. ನನ್ನನ್ನು ಮತ್ತೆ ಆಹ್ವಾನಿಸುವಂತೆ ಮಾಡುತ್ತೇನೆ. ನಾನು ಶಾಸಕರನ್ನು ವಿಮಾನದಲ್ಲಿ ಗೋವಾಕ್ಕೆ ಅಥವಾ ಬೇರೆ ಸ್ಥಳಕ್ಕೆ ಕರೆದೊಯ್ಯುವುದಿಲ್ಲ. ಅದು ಹೇಗೆ ಕಾರ್ಯಾಚರಣೆ ಮಾಡುತ್ತೇನೆ ಎಂದು ಹೇಳುವುದಿಲ್ಲ. ಇದು ಗಿಮಿಕ್ ಕೂಡ ಅಲ್ಲ ಎಂದು ಎಚ್ಚರಿಕೆ ನೀಡಿದರು.

ಗಾಂಧಿ ಕುಟುಂಬಕ್ಕೆ ನನ್ನ ದಾರಿ ಏನೆಂಬುದು ಗೊತ್ತಿದೆ. ಪ್ರಿಯಾಂಕ ಮತ್ತು ರಾಹುಲ್ ಗಾಂಧಿ ನನ್ನ ಮಕ್ಕಳು ಇದ್ದಹಾಗೆ. ನಾನು ಅವಮಾನಕ್ಕೆ ಒಳಗಾಗಿದ್ದೇನೆ. ಗಾಂದಿ ಮಕ್ಕಳು ಅನನುಭವಿಗಳು ಅವರ ಸಲಹೆಗಾರರು ತಪ್ಪು ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular