ದೇಶದಲ್ಲಿ ಡೆಮಾಕ್ರೆಟಿಕ್ ಉದ್ದೇಶ ಜಾರಿಯಾಗುತ್ತಿಲ್ಲ. ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ದೇಶ ನಿರ್ಮಾಣ ಮಾಡಲು ಮಂದಾಗಬೇಕಿದೆ. ಚಳವಳಿ ರಾಜಕಾರಣಿಗಳು ಜಗಜೀವನ್ ರಾಂ ಅವರ ಮಾದರಿ ಅನುಸರಿಸಬೇಕಿದೆ. ದ್ವೇಷ ಉಗುಳುವ ಕಾಲದಲ್ಲಿ ಜಾತಿ ಬೀಜ ಬೀತ್ತುವ ಸಮಯದಲ್ಲಿ ನಾವುಗಳು ಇದ್ದೇವೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.
ತುಮಕೂರು ನಗರದ ಕುಣಿಗಲ್ ರಸ್ತೆಯ ನಾಗಾರ್ಜುನ ಬ್ಯಾಂಕ್ ಆವರಣದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು
ನಮ್ಮ ಜನಾಂಗ ಇಕ್ಕಟ್ಟು ಬಿಕಟ್ಟು ಎದುರಿಸುತ್ತಿದ್ದು, ಅತಂತ್ರ ಸ್ಥಿತಿಯಲ್ಲಿದೆ. ಇಂದು ಆಚರಣೆಗಳು ಆರಾಧನೆಯಾಗಿವೆ. ಈ ನಿಟ್ಟಿನಲ್ಲಿ ಬಾಬು ಜಗ ಜೀವನ್ರಾಂ ಆಚರಣೆ ಸಂದರ್ಭದಲ್ಲಿ ಅವರ ತತ್ವಾದರ್ಶ ಪಾಲನೆ ಮಾಡಬೇಕು. ಅದು ಆಗುತ್ತಿಲ್ಲ. ನಾವು ಭಿನ್ನವಾಗಿ ಯೋಚಿಸಬೇಕಿದೆ ಎಂದು ತಿಳಿಸಿದರು.
ಜಗತ್ತಿನಲ್ಲಿ ಯುದ್ದ ನಡೆತ್ತಿದೆ. ಅದರ ನೋವು ಎಲ್ಲಾ ಸಮಾಜದ ಜನರಿಗೆ ಆಗುತ್ತಿದೆ. ಇದು ಪ್ರಕೃತಿಗೂ ತಟ್ಟಿದೆ. ಸಾಮಾಜಿಕ ಜಾತಿ ಸಂಘರ್ಷವನ್ನು ನಾವು ಅನುಭವಿಸುತ್ತಿದ್ದೇವೆ. ಸಾಮಾಜಿಕ ಚಿಂತಕ ಜಗ ಜೀವರಾಂ ವಿಚಾರ ವಿಮರ್ಶೆ ವಿನಿಮಯ ಮಾಡಬೇಕಿದೆ ತತ್ವಾದರ್ಶ ಪಾಲನೆಯಾಗಬೇಕಿದೆ ಎಂದರು.
ಸಮಾಜ ಮುನ್ನಡೆಸಲು ಕಮ್ಯುನಿಸ್ಟ್ ಪಕ್ಷಗಳು ವಿಫಲ
ಪರಿಸರ ಹೋರಾಟಗಾರ ಯತಿರಾಜ್ ಮಾತನಾಡಿ, ದೇಶ ದೊಡ್ಡದು ಎಂದು ಸರ್ಕಾರ ಹೇಳುತ್ತಿದೆ. ಜಾಗತಿಕ ಕಾರಣದಿಂದ ದೇಶ ಹಾಳಾಗಿದೆ. ಸೋಷಿಯಲ್ ಮೀಡಿಯಾಗಳಿಂದ ಸುಳ್ಳು ಸುದ್ದಿ ಮೂಲಕ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಇಂದು ಯುದ್ದ ಸಂಘರ್ಷ ಗಳು ನಡೆಯುತ್ತಿವೆ. ಯುವ ಸಮುದಾಯದ ಒಂದಾಗಿದೆ. ರಾಜಕೀಯ ಪಕ್ಷಗಳ ಹಿತಾಸಕ್ತಿ ಕಿತ್ತೊಗೆಯಬೇಕು ಎಂದರು.
ಕಮ್ಯುನಿಸ್ಟ್ ಪಕ್ಷಗಳು ಸಮಾಜ ಮುನ್ನಡೆಸಲು ವಿಫಲವಾಗಿವೆ. ಬಾಬು ಜಗಜೀವನ್ರಾಂ ಅವರು ಅವರ ಆಡಳಿತದ ವೈಖರಿ ಉದ್ದೇಶ ನೋಡಬೇಕಿದೆ. ಸಮ ಸಮಾಜದ ಅಭಿವೃದ್ಧಿ ಮಾಡುವ ಗಂಭೀರವಾದ ಚಿಂತನೆ ಬಾಬೂಜಿ ತತ್ವಾದರ್ಶ ಪಾಲನೆ ಹೋರಾಟದಿಂದ ಯಾಗಬೇಕಿದೆ ಎಂದರು.
ಪಾವಗಡ ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆಂಚಮಾರಾಯ್ಯ, ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಮಾತನಾಡಿದರು. ಮಾಜಿ ಶಾಸಕ ಗಂಗಹನುಮಯ್ಯ, ಒಳ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ವೈಕೆ ಬಾಲಕೃಷ್ಣ, ಡಿಟಿ ವೆಂಕಟೇಶ್, ಹೆಚ್ ಆರ್ ಹನುಮಂತರಾಯಪ್ಪ, ಪಾವಗಡ ಶ್ರೀರಾಮ್, ಕೊಟ್ಟ ಶಂಕರ್. ಕೊಡಿಯಲ್ ಮಹಾದೇವ, ಯೋಗೀಶ್, ಟಿಸಿ ರಾಮಯ್ಯ ಇದ್ದರು.


