Saturday, October 19, 2024
Google search engine
Homeಜಿಲ್ಲೆವಯಸ್ಸಾದ್ರು ಮದುವೆ ಆಗಿಲ್ಲ - ಹೆಣ್ಣು ಯಾರೂ ಕೊಡಲ್ಲ ಅಂದಿದ್ದಕ್ಕೆ ಕೊಲೆ

ವಯಸ್ಸಾದ್ರು ಮದುವೆ ಆಗಿಲ್ಲ – ಹೆಣ್ಣು ಯಾರೂ ಕೊಡಲ್ಲ ಅಂದಿದ್ದಕ್ಕೆ ಕೊಲೆ

ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಜಗಳ ನಡೆದಿದ್ದು 37 ವರ್ಷ ಆದ್ರೂ ಮದುವೆ ಆಗಿಲ್ಲ, ನಿನಗೆ ಯಾರೂ ಹುಡುಗಿ ಕೊಡಲ್ಲಾ ಎಂದು ಕಿಚಾಯಿಸಿದವನನ್ನೇ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹರವೆ ಗ್ರಾಮದ ಸಣ್ಣಸ್ವಾಮಿ ನಾಯಕ (48) ಕೊಲೆಯಾದ ವ್ಯಕ್ತಿ. ಈತ ಕುಮಾರ ನಾಯಕ ಸ್ನೇಹಿತ ಕುಮಾರ ನಾಯಕ ಎಂದು ಪೊಲೀಸರು ತಿಳಿಸಿದ್ದಾರೆ.

ಸಣ್ಣಸ್ವಾಮಿ ನಾಯಕ ಹಾಗೂ ಕುಮಾರ ನಾಯಕ ಸ್ನೇಹಿತರು. ಹರವೆ ಗ್ರಾಮದಲ್ಲಿ ಇವರು ಮದ್ಯಪಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಣ್ಣಸ್ವಾಮಿ ನಾಯಕ, ಕುಮಾರ ನಾಯಕನನ್ನು ಕಿಚಾಯಿಸಲು ಆರಂಭಿಸಿದ ಎಂದು ತಿಳಿದುಬಂದಿದೆ.

ನಿನಗೆ 37 ವರ್ಷವಾದರೂ ಮದುವೆಯಾಗಿಲ್ಲ. ನಿನಗೆ ಯಾರೂ ಹುಡುಗಿ ಕೊಡಲ್ಲ ಎಂದು ಸಣ್ಣಸ್ವಾಮಿ ನಾಯಕ ಕಿಚಾಯಿಸಿದ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಇಬ್ಬರು ಸ್ನೇಹಿತರು ಸಾಕಷ್ಟು ಕುಡಿದಿದ್ದರು ಎಂದು ತಿಳಿದುಬಂದಿದ್ದು ಮಾತಿಗೆ ಮಾತು ಬೆಳೆದು ಕುಮಾರ ನಾಯಕ ಚಾಕು ಕೈಗೆತ್ತಿಕೊಂಡು ಸಣ್ಣಸ್ವಾಮಿ ನಾಯಕನಿಗೆ ಇರಿದ ಪರಿಣಾಮ ಸಣ್ಣಸ್ವಾಮಿ ಮೃತಪಟ್ಟಿದ್ದಾನೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular