Monday, September 16, 2024
Google search engine
Homeಮುಖಪುಟನೇಪಾಳದಲ್ಲಿ ಭೂಕಂಪನ - ಭಾರತದ ಉತ್ತರ ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವ

ನೇಪಾಳದಲ್ಲಿ ಭೂಕಂಪನ – ಭಾರತದ ಉತ್ತರ ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವ

ಉತ್ತರಾಖಂಡದ ಜೋಶಿ ಮಠದಿಂದ ಆಗ್ನೇಯಕ್ಕೆ 212 ಕಿಲೋ ಮೀಟರ್ ದೂರದ ನೇಪಾಳದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಶನಿವಾರ ರಾತ್ರಿ ದೆಹಲಿ ಮತ್ತು ಇತರ ಕೆಲವು ಉತ್ತರ ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪನವು ಸಂಭವಿಸಿ ಆರು ಜನರನ್ನು ಬಲಿ ತೆಗೆದುಕೊಂಡ ಮೂರು ದಿನಗಳ ನಂತರ ಈ ಪ್ರದೇಶದಲ್ಲಿ ಮತ್ತೆ ಕಂಪಿಸಿದೆ. ಒಂದು ವಾರದಲ್ಲಿ ನೇಪಾಳದಲ್ಲಿ ಸಂಭವಿಸಿದ ಮೂರನೇ ಭೂಕಂಪ ಇದಾಗಿದೆ.

ಭೂಕಂಪನವು ನೇಪಾಳದಲ್ಲಿ 10 ಕಿಮೀ ಆಳದಲ್ಲಿ ಅಕ್ಷಾಂಶ 29.28 ಎನ್ ಮತ್ತು ರೇಖಾಂಶ 81.20 ಇಯೊಂದಿಗೆ ಹುಟ್ಟಿಕೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಉತ್ತರಾಖಂಡದ ಪಿಥೋರಗಢ್, ಮುನ್ಸಿಯಾರಿ ಮತ್ತು ಗಂಗೊಳ್ಳಿಹಾಟ್ ಸೇರಿದಂತೆ ಸ್ಥಳಗಳಲ್ಲಿ ಕಂಪನದ ಅನುಭವವಾಗಿದೆ.

ಭೂಕಂಪದ ಮೂಲವು 10 ಕಿಲೋ ಮೀಟರ್ ಆಳ ನೇಪಾಳದ ಸಿಲಂಗಾ ಪಟ್ಟಣದಿಂದ 3 ಕಿಮೀ ದೂರದಲ್ಲಿದೆ. ಭಾರತ, ಚೀನಾ ಮತ್ತು ನೇಪಾಳ ಪೀಡಿತ ಪ್ರದೇಶಗಳು ಎಂದು ಪಿಥೋರಗಢ ವಿಪತ್ತು ನಿರ್ವಹಣಾ ಅಧಿಕಾರಿ ಬಿ.ಎಸ್.ಮಹಾರ್ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭೂಕಂಪನ ಸಂಭವಿಸಿದ್ದು ಯಾವುದೇ ಹಾನಿಯ ಬಗ್ಗೆ ತಕ್ಷಣದ ವರದಿ ಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಉತ್ತರಾಖಂಡದ ಪಿಥೋರಗಢ್, ಮುನ್ಸಿಯಾರಿ ಮತ್ತು ಗಂಗೊಳ್ಳಿಹಾಟ್ ಸೇರಿದಂತೆ ಸ್ಥಳಗಳಲ್ಲಿ ಕಂಪನದ ಅನುಭವವಾಗಿದೆ.

"ಭೂಕಂಪದ ಮೂಲವು 10 ಕಿಮೀ ಆಳ ಮತ್ತು ನೇಪಾಳದ ಸಿಲಂಗಾ ಪಟ್ಟಣದಿಂದ 3 ಕಿಮೀ ದೂರದಲ್ಲಿದೆ. ಭಾರತ, ಚೀನಾ ಮತ್ತು ನೇಪಾಳ ಪೀಡಿತ ದೇಶಗಳು" ಎಂದು ಪಿಥೋರಗಢ ವಿಪತ್ತು ನಿರ್ವಹಣಾ ಅಧಿಕಾರಿ ಬಿಎಸ್ ಮಹಾರ್ ಪಿಟಿಐಗೆ ತಿಳಿಸಿದ್ದಾರೆ.

ಯಾವುದೇ ಹಾನಿಯ ಬಗ್ಗೆ ತಕ್ಷಣದ ವರದಿ ಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular