ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರ ಸಹಾನುಭೂತಿಯಿಂದ ನಡೆದುಕೊಳ್ಳಬೇಕಾಗಿದೆ. ಹಾಗೆಯೇ ಆರಾಧನಾ ಮನೋಭಾವ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವಾಗಿದೆ ಎಂದು ಆರ್.ಜೆಡಿ ಸಂಸದ ಮನೋಜ್ ಕುಮಾರ್ ಝಾ ಕಳವಳ ವ್ಯಕ್ತಪಡಿಸಿದ್ದಾರೆ.
ಧರ್ಮದ ಆಧಾರದಲ್ಲಿ ಸರ್ಕಾರ ದೇಶವನ್ನು ವಿಭಜಿಸುತ್ತಿದೆ. ಹಿಂದಿನ ಪಠ್ಯಗಳ ಜಾರಿಯಿಂದ ಸಾಕಷ್ಟು ಗೊಂದಲಗಳು ಉಂಟಾಗುತ್ತಿವೆ. ಪಾಕಿಸ್ತಾನವು ಭಾರತದ ಹೆಸರಿನಲ್ಲಿ ಚುನಾವಣೆಗಳನ್ನು ಎದುರಿಸುವುದಿಲ್ಲ ಎಂದು ನನಗೆ ಆಶ್ಚರ್ಯವಾಗಿದೆ ಎಂದು ಹೇಳಿದರು.
ರೈಲ್ವೆ ಉದ್ಯೋಗ ಆಕಾಂಕ್ಷಿಗಳು ಇತ್ತೀಚಿನ ಪ್ರತಿಭಟನೆಯ ಬಗ್ಗೆ ಝಾ ಮಾತನಾಡಿ, ದೂರದರ್ಶನಗಳನ್ನು ವೀಕ್ಷಿಸುತ್ತಾ, ಸಾಮಾಜಿಕ ಮಾಧ್ಯವನ್ನು ಪರಿಶೀಲಿಸುತ್ತಾ ಮತ್ತು ಚರ್ಚೆಗಳನ್ನು ನಡೆಸುತ್ತ ತಮ್ಮ ದಿನವನ್ನು ಕಳೆಯುತ್ತಾರೆ ಎಂದು ರಾಷ್ಟ್ರಪತಿಗಳ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಸಿಡಿಸಿದರು. ವಿದ್ಯಾರ್ಥಿಗಳು ಸೌಲಭ್ಯಗಳನ್ನು ನೀಡುವಂತೆ ಕೇಳಿದರು. ಅವರೇನು ಚಂದ್ರನನ್ನು ಕೇಳಲಿಲ್ಲ. ಆದರೂ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದೀರಿ ಎಂದು ಟೀಕಿಸಿದರು.
ಬಲಿಷ್ಠ ರಾಷ್ಟ್ರಗಳ ಅವಧಿಯಲ್ಲಿ ಶಿವಸೇನೆಯ ಸಂಸದೆ ಪ್ರಿಯಾಂಕ ಚತುರ್ವೇದು ಅಸುರಕ್ಷಿತ ಸರ್ಕಾರಗಳಿಂದ ಏನನ್ನೂ ನಿರ್ಮಿಸಲು ಸಾಧ್ಯವಿಲ್ಲ. ದೇಶದ ಮುಂದೆ ಸಾಮರ್ಥ್ಯ ಮತ್ತು ದೌರ್ಬಲ್ಯಗಳೆರಡನ್ನೂ ಇರಿಸಿದರೆ ಅಭಿವೃದ್ಧಿಗೆ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂದರು.
ನಾವು ರಾಷ್ಟ್ರಪತಿ ಭಾಷಣ ಕೇಳಿದ್ದೇವೆ. ಅದರಲ್ಲಿ ನಮ್ಮ ದೇಶವು ಸುವರ್ಣ ಯುಗವನ್ನು ಪ್ರವೇಶಿಸಿದಂತೆ ಭಾಸವಾಯಿತು. ನಮ್ಮ ಯುವಕರು ತುಂಬಾ ಸಂತೋಷವಾಗಿದ್ದಾರೆ. ಅವರಿಗೆ ಉದ್ಯೋಗವಿದೆ. ಮಹಿಳೆಯರು ಸಹ ಸಂತೋಷವಾಗಿದ್ದಾರೆ. ಅವರು ಸುರಕ್ಷಿತವಾಗಿದ್ದಾರೆ. ಸಾಮಾನ್ಯ ಜನರಿಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ವ್ಯಂಗ್ಯ ಮಾಡಿದರು.