‘ಯಾವುದೇ ಸಮುದಾಯದ ಸದಸ್ಯರು ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಪ್ರಾರ್ಥನೆಗಳನ್ನು ನಡೆಸಬಾರದು’ ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಎಲ್ಲಾ ಧರ್ಮಗಳ ಜನರು ದೇವಾಲಯ, ಮಸೀದಿ, ಗುರುದ್ವಾರ ಮತ್ತು ಚರ್ಚ್ ಗಳಂತಹ ಗೊತ್ತುಪಡಿಸಿದ ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ ನಡೆಸಲಾಗುತ್ತಿದೆ. ಎಲ್ಲಾ ದೊಡ್ಡ ಹಬ್ಬ ಮತ್ತು ಕಾರ್ಯಕ್ರಮಗಳಿಗೆ ಮುಕ್ತವಾಗಿ ಅನುಮತಿ ನೀಡಲಾಗುತ್ತದೆ ಎಂದು ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಅಫ್ತಾಬ್ ಅಹ್ಮದ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಆದರೆ ಇನ್ನೊಂದು ಸಮುದಾಯದವರ ಭಾವನೆಗಳನ್ನು ಕೆರಳಿಸುವ ಶಕ್ತಿ ಪ್ರದರ್ಶನ ಸೂಕ್ತವಲ್ಲ ಎಂದು ಖಟ್ಟರ್ ತಿಳಿಸಿದರು.
ಕೆಲವು ಅಂಶಗಳು ಶುಕ್ರವಾರದ ಪ್ರಾರ್ಥನೆಗೆ ಪದೇ ಪದೇ ಅಡ್ಡಿಪಡಿಸುತ್ತಿವೆ. ಸಂವಿಧಾನ ಧರ್ಮವನ್ನು ಆಚರಿಸುವ ಹಕ್ಕನ್ನು ನೀಡಿದೆ ಪ್ರಾರ್ಥನೆಗೆ ಅಡ್ಡಿಪಡಿಸುವ ಹಕ್ಕು ಯಾರಿಗೂ ಇಲ್ಲ ಎಂದು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಹೇಳಿದರು.
ಗುರುಗ್ರಾಮ್ ಗೆ ಸಾವಿರಾರು ಕೋಟಿ ಬಂಡವಾಳ ಹರಿದು ಬಂದಿರುವುದು ನಗರ ಅಭಿವೃದ್ಧಿಯ ಸಂಕೇತವಾಗಿದೆ. ಒಬ್ಬರ ಆಯ್ಕೆ ಪ್ರಕಾರ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗದಿದ್ದರೆ ಗುರುಗ್ರಾಮ್ ನಿಂದ ಯಾವ ಸಂದೇಶ ರವಾನಿಸಲಾಗುವುದು ತಿಳಿಸಬೇಕು ಎಂದು ಕೇಳಿದರು.
ಯಾವುದೇ ಸಮುದಾಯ ಸದಸ್ಯರು ಸಾರ್ವಜನಿಕ ಜಾಗದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಬಾರದು. ದೇವಸ್ಥಾನ, ಮಸೀದಿ ಗುರುದ್ವಾರ ಮತ್ತು ಚರ್ಚುಗಳಲ್ಲಿ ನಡೆಸಬೇಕು. ಸಮಾಜದಲ್ಲಿ ಶಾಂತಿ ಕಾಪಾಡುವುದು ಮತ್ತು ಸಂಘರ್ಷವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸಿದಾಗ ಮುಖಾಮುಖಿ ಪರಿಸ್ಥಿತಿಗೆ ಕಾರಣವಾಗುತ್ತದೆ. ಇದು ಸ್ಥಳೀಯ ಸಮಸ್ಯೆ, ಕೋಮುಸೌಹಾರ್ದತೆ ಹದಗೆಡುವಂತಹ ವಿಚಾರದ ಬಗ್ಗೆ ಗದ್ದಲ ಎಬ್ಬಿಸಬೇಕಾದ ಅಗತ್ಯವಿಲ್ಲ ಎಂದರು.
ದಿನನಿತ್ಯ ಅಥವಾ ಸಾಪ್ತಾಹಿಕ ಪ್ರಾರ್ಥನೆಗಳಿಗೆ ಗೊತ್ತುಪಡಿಸಿದ ಸ್ಥಳಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಘರ್ಷಣೆ ಉಂಟಾದರೆ ಸೌಹಾರ್ದಯುತ ಪರಿಹಾರ ಕಂಡುಹಿಡಿಬೇಕು ಎಂದು ಖಟ್ಟರ್ ಹೇಳಿದರು.


