ಪಂಜಾಬ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಮಾಜಿ ಅಕಾಲಿ ನಾಯಕ ಸುಖದೇವ್ ಸಿಂಗ್ ಧಿಂಡ್ಸಾ ಅವರ ಪಕ್ಷಗಳೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಾವು ಕ್ಯಾಪ್ಟನ್ ಸಾಬ್ ಮತ್ತು ಧಿಂಡಾ ಸಾಬ್ ಅವರೊಂದಿಗೆ ಮಾತನಾಡುತ್ತಿದ್ದೇವೆ. ನಾವು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದರು.
ರೈತರ ಪ್ರತಿಭಟನೆ ಕೊನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ದೊಡ್ಡ ಹೃದಯ ತೋರಿದರು. ಕೃಷಿ ಕಾನೂನುಗಳ ನಿಮಗೆ ಪ್ರಯೋಜನವಾಗಿಲ್ಲ ಎಂದು ಭಾವಿಸಿದರೆ ಪರವಾಗಿಲ್ಲ ಎಂದು ಹೇಳಿ ಹಿಂದಕ್ಕೆ ತೆಗೆದುಕೊಂಡರು. ಹೀಗಾಗಿ ಪಂಜಾಬ್ ನಲ್ಲಿ ಯಾವುದೇ ಸಮಸ್ಯೆ ಉಳಿದಿಲ್ಲ ಎಂದು ಹೇಳಿದರು.
ಪಂಜಾಬ್ ನಲ್ಲಿ ಚುನಾವಣೆಗಳು ಅರ್ಹತೆಯ ಆಧಾರದ ಮೇಲೆ ನಡೆಯುತ್ತವೆ ಎಂದು ಶಾ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯತ್ವ ಮರುಸ್ಥಾಪಿಸಿದ ನಂತರ ಚುನಾವಣೆ ನಡೆಸಬೇಕೆಂಬುದು ರಾಜಕೀಯ ವಿವಾದ ಸೃಷ್ಟಿಸುವ ಪ್ರಯತ್ನವಾಗಿದೆ. ಈ ಪ್ರದೇಶದಲ್ಲಿ ಕ್ಷೇತ್ರಪುನರ್ ವಿಂಗಡಣೆ ನಡೆಯಲಿದೆ. ನಂತರ ಚುನಾವಣೆಗಳು ನಡೆದು ರಾಜ್ಯತ್ವ ಮರುಸ್ಥಾಪಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.
ನಾನು ಅಬ್ದುಲ್ಲಾ ಸಾಬ್ ಹೇಳಿಕೆಯನ್ನು ನೋಡಿದ್ದೇನ. ಆರ್ಟಿಕಲ್ 370 ಅನ್ನು ಪುನರ್ ಸ್ಥಾಪಿಸಿದಾಗ ಮಾತ್ರ ಕಾಶ್ಮೀರವು ಶಾಂತಿ ಕಾಣಲಿದೆ ಎಂದು. ಆದರೆ 75 ವರ್ಷ ಏಕೆ ಶಾಂತಿ ಇರಲಿಲ್ಲ. ಆರ್ಟಿಕಲ್ 370 ಮತ್ತು ಶಾಂತಿ ನಡುವೆ ಸಂಬಂಧವಿದ್ದರೆ ಅದು 1990ರ ದಶಕದಲ್ಲಿ ಇರಲಿಲ್ಲ. ನಾವು ಈಗ ಶಾಂತಿ ನೆಲೆಸುವಂತೆ ಮಾಡಿದ್ದೇವೆ ಎಂದು ಹೇಳಿದರು.


