Wednesday, March 4, 2026
Google search engine
Homeಮುಖಪುಟದ್ವೇಷಪೂರಿತ ಪೋಸ್ಟ್ - ಕಂಗನಾ ರಾಣಾವತ್ ವಿರುದ್ಧ ದೆಹಲಿ ವಿಧಾನಸಭೆ ಸಮನ್ಸ್ ಜಾರಿ

ದ್ವೇಷಪೂರಿತ ಪೋಸ್ಟ್ – ಕಂಗನಾ ರಾಣಾವತ್ ವಿರುದ್ಧ ದೆಹಲಿ ವಿಧಾನಸಭೆ ಸಮನ್ಸ್ ಜಾರಿ

ಸಾಮಾಜಿಕ ಜಾಲತಾಣದಲ್ಲಿ ಸಿಖ್ ಧರ್ಮದ ವಿರುದ್ಧ ದ್ವೇಷಪೂರಿತ ಪೋಸ್ಟ್ ಗಳನ್ನು ಹಾಕಿದ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ದೆಹಲಿಯ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ದ ಸಮಿತಿ ಸಮನ್ಸ್ ಜಾರಿ ಮಾಡಿದೆ.

ಈ ವಿಷಯ ತಿಳಿಸಿದ ಸಮಿತಿ ಅಧ್ಯಕ್ಷ ರಾಘವ್ ಚಡ್ಡಾ, ರಣಾವತ್ ಅವರು ಪೋಸ್ಟ್ ಮಾಡಿದ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಇನ್ ಸ್ಟಾಗ್ರಾಮ್ ಸುದ್ದಿಯನ್ನು ಉಲ್ಲೇಖಿಸಿ ನೀಡಿದ ದೂರುಗಳ ಆಧಾರದ ಮೇಲೆ ಡಿಸೆಂಬರ್ 6ರಂದು ರಾಣಾವತ್ ಸಮಿತಿಯ ಮುಂದೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ.

ಕಂಗನಾ ರಾಣಾವತ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿರುವ ಸುದ್ದಿಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ವಿಶ್ವದಾದ್ಯಂತ ಸುಮಾರು 80 ಲಕ್ಷ ಜನರು ಅನುಸರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ನಿರ್ದಿಷ್ಟವಾಗಿ ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ನಿದರ್ಶನಗಳನ್ನು ಹೊಂದಿದೆ. ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಪ್ರವೃತ್ತಿ ಇದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ದೆಹಲಿಯ ಎಲ್ಲಾ ಸಮಸ್ಯೆಗಳ ಪ್ರಾಮುಖ್ಯತೆ ಗಮನದಲ್ಲಿಟ್ಟುಕೊಂಡು ಶಾಸಕ ರಾಘವ್ ಚಡ್ಡಾ ಅಧ್ಯಕ್ಷತೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಸಮಿತಿಯು ತನ್ನ ಮುಂದೆ ಹಾಜರಾಗುವಂತೆ ಕಂಗನಾ ಅವರಿಗೆ ಸಮನ್ಸ್ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular