ಸ್ಥಳೀಯ ಸಂಸ್ಥೆಗಳ ಮೂಲಕ ರಾಜ್ಯದ 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ 20 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಗುಲ್ಬರ್ಗಾ – ಶಿವಾನಂದ ಮರ್ತೂರು
ಬೆಳಗಾವಿ – ಚನ್ನರಾಜ ಬಸವರಾಜ ಹೊಟ್ಟಿಹೊಳಿ
ಉತ್ತರ ಕನ್ನಡ – ಭೀಮಣ್ಣ ನಾಯ್ಕ್
ಹುಬ್ಬಳ್ಳಿ-ಧಾರವಾಡ-ಗದಗ-ಹಾವೇರಿ – ಸಲೀಂ ಅಹಮದ್
ರಾಯಚೂರು – ಶರಣಗೌಡ ಅನ್ನದಾನಗೌಡ ಪಾಟೀಲ್
ಚಿತ್ರದುರ್ಗ – ಬಿ. ಸೋಮಶೇಖರ್
ಶಿವಮೊಗ್ಗ – ಆರ್. ಪ್ರಸನ್ನ ಕುಮಾರ್
ದಕ್ಷಿಣ ಕನ್ನಡ – ಮಂಜುನಾಥ್ ಭಂಡಾರಿ
ಚಿಕ್ಕಮಗಳೂರು – ಗಾಯತ್ರಿ ಶಾಂತೇಗೌಡ
ಹಾಸನ – ಎಂ.ಶಂಕರ್
ತುಮಕೂರು – ಆರ್. ರಾಜೇಂದ್ರ
ಮಂಡ್ಯ – ಎಂ.ಜಿ. ಗೂಳಿಗೌಡ
ಬೆಂಗಳೂರು ಗ್ರಾಮಾಂತರ – ಎಸ್.ರವಿ
ಕೊಡಗು – ಮಂಥರ್ ಗೌಡ
ವಿಜಯಪುರ-ಬಾಗಲಕೋಟೆ – ಸುನಿಲ್ ಗೌಡ ಪಾಟೀಲ್
ಮೈಸೂರು-ಚಾಮರಾಜನಗರ – ಡಾ. ಡಿ.ತಿಮ್ಮಯ್ಯ
ಬಳ್ಳಾರಿ – ಕೆ.ಸಿ.ಕೊಂಡಯ್ಯ
ಬೀದರ್ – ಭೀಮರಾವ್ ಬಿ. ಪಾಟೀಲ್
ಬೆಂಗಳೂರು ನಗರ – ಯೂಸುಫ್ ಶರೀಫ್
ಕೋಲಾರ್ – ಎಂ.ಎಲ್.ಅನಿಲ್ ಕುಮಾರ್
ಈ ಅಭ್ಯರ್ಥಿಗಳಲ್ಲಿ ಕೆಲವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ತುಮಕೂರಿನಿಂದ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ ಅವರು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಮಾಜಿ ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.


