Friday, January 30, 2026
Google search engine
Homeಮುಖಪುಟಲಖಿಂಪುರಖೇರಿ ರೈತ ಹತ್ಯಾ ಪ್ರಕರಣ - ತನಿಖೆಯ ಮೇಲುಸ್ತುವಾರಿಯಾಗಿ ನಿವೃತ್ತ ನ್ಯಾ.ಜೈನ್ ನೇಮಕ

ಲಖಿಂಪುರಖೇರಿ ರೈತ ಹತ್ಯಾ ಪ್ರಕರಣ – ತನಿಖೆಯ ಮೇಲುಸ್ತುವಾರಿಯಾಗಿ ನಿವೃತ್ತ ನ್ಯಾ.ಜೈನ್ ನೇಮಕ

ಉತ್ತರ ಪ್ರದೇಶದ ಲಖಿಂಪುರ್ ಖೇರಿ ರೈತ ಹತ್ಯಾ ಪ್ರಕರಣದ ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳಲು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಅವರನ್ನು ಸುಪ್ರೀಂಕೋರ್ಟ್ ನೇಮಕ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಹಿಮ ಕೋಹ್ಲಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವನ್ನು ಮರುರಚನೆ ಮಾಡಿದೆ. ಉತ್ತರ ಪ್ರದೇಶದ ಐಜಿಪಿ ಪದ್ಮಜ ಚೌಹಾಣ್ ಸೇರಿ ಇತರೆ ಅಧಿಕಾರಿಗಳು ಈಗ ಎಸ್ಐಟಿ ಭಾಗವಾಗಿದ್ದಾರೆ.

“ನ್ಯಾಯಮೂರ್ತಿ ಜೈನ್ ಆಯೋಗ ನಿಷ್ಪಕ್ಷಪಾತ ಮತ್ತು ಸ್ವತಂತ್ರ ತನಿಖೆಯನ್ನು ಖಚಿತಪಡಿಸುತ್ತದೆ. ಲಖಿಂಪುರ್ ಖೇರಿ ರೈತ ಹತ್ಯಾ ಪ್ರಕರಣದ ತನಿಖೆಯನ್ನು ನ್ಯಾಯಮೂರ್ತಿ ಜೈನ್ ನೇತೃತ್ವದಲ್ಲಿ ಎಸ್ಐಟಿ ನಡೆಸಲಿದೆ. ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ವಿಷಯವನ್ನು ಪಟ್ಟಿ ಮಾಡಲಾಗುವುದು ಎಂದು ಆದೇಶ ನೀಡಿದೆ.

ನ್ಯಾಯಮೂರ್ತಿ ಜೈನ್ ಅವರು 1982ರಲ್ಲಿ ಪಂಜಾಬ್ ಮತ್ತು ಹರ್ಯಾಣ ಭಾರತೀಯ ವಕೀಲರ ಪರಿಷತ್ ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದು ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಡಿಸೆಂಬರ್ 5, 2007ರಲ್ಲಿ ಹರ್ಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಸೆಪ್ಟೆಂಬರ್ 30, 2020ರಲ್ಲಿ ನಿವೃತ್ತಿ ಹೊಂದಿದ್ದಾರೆ.

ಲಖಿಂಪುರ್ ಖೇರಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಆದೇಶವನ್ನು ಹೊರಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular