ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಮುಖಾಮುಖಿ ಗುಂಡಿನ ಚಕಮಕಿಯಲ್ಲಿ ಕನಿಷ್ಠ 26 ಮಂದಿ ಮಾವೋವಾದಿ ನಕ್ಸಲೀಯರು ಹತ್ಯೆಯಾಗಿರುವ ಘಟನೆ ಮಹಾರಾಷ್ಟ್ರದ ಗಾಡ್ ಚಿರೋಲಿ ಜಿಲ್ಲೆಯಲ್ಲಿ ನಡೆದಿದೆ.
ಘನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದು ನಾಗ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎನ್ ಕೌಂಟರ್ ನಡೆದ ಸ್ಥಳದಲ್ಲಿ 29 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ ಕೌಂಟರ್ ಸ್ಥಳದಲ್ಲಿ ಮಾವೋವಾಧಿಗಳ ಉನ್ನತ ನಾಯಕ ಮಿಲಿಂದ್ ತೇಲ್ತುಂಬ್ಡೆ ಮೃತಪಟ್ಟಿದ್ದು, ತೇಲ್ತುಂಬ್ಡೆ ನಿಷೇಧಿತ ಸಿಪಿಐ ಮಾವೋವಾದಿ ಮಹಾರಾಷ್ಟ್ರ-ಮಧ್ಯಪ್ರದೇಶ-ಛತ್ತೀಸ್ ಗಢ ವಲಯದ ಮುಖ್ಯಸ್ಥರು ಎಂದು ಪೊಲೀಸರು ತಿಳಿಸಿದ್ದಾರೆ.
ಗಡ್ ಚಿರೋಲಿ ಪೊಲೀಸ್ ಅಧೀಕ್ಷಕ ಅಂಕಿತ್ ಗೋಯಲ್ ‘ನಾವು ಇಲ್ಲಿಯವರೆಗೆ 26 ಶವಗಳನ್ನು ವಶಪಡಿಸಿಕೊಂಡಿದ್ದೇವೆ’ ಎಂದು ಅವರ ಹೇಳಿಕೆ ಉಲ್ಲೇಖಿಸಿ ಸಂಡೆ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಗಾಯಗೊಂಡ ಪೊಲೀಸರನ್ನು ರವೀಂದ್ರ ಸೈತಮ್, ಸರ್ವೇಶ್ವರ್ ಅತರನ್, ಮರು ಕುಡ್ಮೆಥೇ, ಟಿಕಾರಾಂ ಕಟಾಂಗೆ ಎಂದು ಗುರುತಿಸಲಾಗಿದೆ.
ಗಡ್ ಚಿರೋಲಿ ವಿಭಾಗೀಯ ಸಮಿತಿ ಸದಸ್ಯ ಸುಖಲಾಲ್ ನೇತೃತ್ವದ ಕೊರ್ಚಿ ದಲಂ ಸದಸ್ಯರನ್ನು ಒಳಗೊಂಡಿತ್ತು. ಆದರೆ ಎನ್ ಕೌಟಂರ್ ದೀರ್ಘಾವಧಿಯಾದ್ದರಿಂದ ಮಾವೋವಾದಿಗಳಿಂದ ತೀವ್ರ ಪ್ರತಿತೋಧ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.


