ಜೈಲು ಅಧಿಕಾರಿಗಳಿಗೆ ಜಾಮೀನು ಆದೇಶಗಳ ಸಂವಹನ ವಿಳಂಬವು ಅತ್ಯಂತ ಗಂಭೀರ ಕೊರತೆಯ ಜೊತೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.
ಅಲಹಾಬಾದ್ ಹೈಕೋರ್ಟ್ ನಲ್ಲಿ ಆಯೋಜಿಸಿದ್ದ ಆನ್ ಲೈನ್ ಸಮಾರಂಭವನ್ನು ಉದ್ಘಾಟಿಸಿದ ಅವರು ವರ್ಚುವಲ್ ಕೋರ್ಟ್ ಗಳು ಮತ್ತು ಇ-ಸೇವಾ ಕೇಂದ್ರಗಳನ್ನು ಕಾನೂನು ಪ್ರಕ್ರಿಯೆಗಳ ಡಿಜಿಟಲೀಕರಣಕ್ಕೆ ಒತ್ತು ನೀಡಿದರು.
ಆ ಪ್ರಮಾಣಪತ್ರವು ಆ ನಿರ್ದಿಷ್ಟ ಅಂಡರ್ ಟ್ರಯಲ್ ಅಥವಾ ಅಪರಾಧಿಗೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ಡೇಟಾವನ್ನು ನಮಗೆ ನೀಡುತ್ತದೆ. ಆರಂಭದಿಂದ ಪತ್ರಿ ಪ್ರಕರಣದ ನಂತರದ ಪ್ರಗತಿಯವರೆ, ಜಾಮೀನು ಅದೇಶಗಳನ್ನು ಮಾಡಿದ ತಕ್ಷಣ ಅವುಗಳನ್ನು ಸಂವಹನ ಮಾಡಿದ ಸ್ಥಳದಿಂದ ತಕ್ಷಣದ ಅನುಷ್ಠಾನಕ್ಕಾಗಿ ಜೈಲುಗಳಿಗೆ ತಿಳಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಬಾಂಬೆ ಹೈಕೋರ್ಟ್ ಜಾಮೀನು ಪಡೆದರೂ ಹೆಚ್ಚುವರಿ ದಿನ ಜೈಲಿನಲ್ಲಿ ಕಳೆದರು. ಏಕೆಂದರೆ ಅವರ ಬಿಡುಗಡೆಯ ಆದೇಶಗಳು ಅರ್ಥರ್ ರೋಡ್ ಜೈಲಿನ ಹೊರಗಿನ ಜಾಮೀನು ಪೆಟ್ಟಿಗೆಯನ್ನು ಸಮಯಕ್ಕೆ ತಲುಪಲಿಲ್ಲ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ ವ್ಯವಸ್ಥೆಯ ಅಗತ್ಯವನ್ನು ಎತ್ತಿಹಿಡಿದ ನ್ಯಾ. ಚಂದ್ರಚೂಡ್ ” ಅಪರಾಧ ನ್ಯಾಯ ವ್ಯವಸ್ಥೆಯಲ್ಲಿನ ಅತ್ಯಂತ ಗಂಭೀರ ಕೊರತೆ ಎಂದರೆ ಜಾಮೀನು ಆದೇಶಗಳ ಸಂವಹನದಲ್ಲಿ ವಿಳಂಬವಾಗಿದೆ. ಇದನ್ನು ನಾವು ಸಮರೋಪಾದಿಯಲ್ಲಿ ಪರಿಹರಿಸಬೇಕಾಗಿದೆ. ಏಕೆಂದರೆ ಪ್ರತಿ ಅಂಡರ್ ಟ್ರಯಲ್ ಮಾನವ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದರು.
ಈ ವರ್ಷದ ಆರಂಭದಲ್ಲಿ ಸಿಐಜೆ ಎನ್.ವಿ.ರಮಣ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಅಗ್ರಾ ಸೆಂಟ್ರಲ್ ಜೈಲಿನಿಂದ 13 ಕೈದಿಗಳಿಗೆ ಜಾಮೀನು ನೀಡಿದ್ದರೂ ಅವರ ಬಿಡುಗಡೆ ವಿಳಂಬದ ಬಗ್ಗೆ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿತ್ತು. ಜೈಲು ಅಧಿಕಾರಿಗಳಿಗೆ ತ್ವರಿತವಾಗಿ ಮತ್ತು ಸುರಕ್ಷಿತವಾಗಿ ವಿದ್ಯುನ್ಮಾನ ಸಂದೇಶವನ್ನು ರವಾನಿಸುವ ವ್ಯವಸ್ಥೆ ಸ್ಥಾಪಿಸುವ ಯೋಜನೆ ಪ್ರಕಟಿಸಿತು. ಇದರಿಂದ ಪರಿಹಾರ ಪಡೆದ ಕೈದಿಗಳು ಬಿಡುಗಡೆಗೊಳ್ಳಲು ಪ್ರಮಾಣಿಕೃತ ಆದೇಶದ ಪ್ರತಿಗಾಗಿ ಕಾಯುವುದನ್ನು ಬಿಡುವುದಿಲ್ಲ.


