Tuesday, January 20, 2026
Google search engine
Homeಮುಖಪುಟರೂ.2 ಲಕ್ಷ ಕೋಟಿ ಅನ್ಯ ವಿಷಯಗಳಿಗೆ ಬಳಕೆ -ದಲಿತರಿಗೆ ಮಹಾ ವಂಚನೆ-ಡಿಎಸ್‌ಎಸ್ ಆರೋಪ

ರೂ.2 ಲಕ್ಷ ಕೋಟಿ ಅನ್ಯ ವಿಷಯಗಳಿಗೆ ಬಳಕೆ -ದಲಿತರಿಗೆ ಮಹಾ ವಂಚನೆ-ಡಿಎಸ್‌ಎಸ್ ಆರೋಪ

ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಕಾಯ್ದೆಗಳ ಹೆಸರಿನಲ್ಲಿ ದಲಿತ ಸಮೂಹಕ್ಕೆ ಸೇರಬೇಕಾದ ಸುಮಾರು 2 ಲಕ್ಷ ಕೋಟಿ ರೂಗಳನ್ನು ಅನ್ಯ ವಿಷಯಗಳಿಗೆ ಬಳಕೆ ಮಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ದೊಡ್ಡ ವಂಚನೆ ಮಾಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆರೋಪಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ದಲಿತ ಸಮೂಹದ ನಿರಂತರ ಹೋರಾಟದ ಫಲವಾಗಿ 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ನಾನು ದಲಿತ ಎಂದು ತೋರಿಸಿಕೊಳ್ಳಲು ಎಸ್.ಪಿ.ಪಿ ಮತ್ತು ಟಿ.ಎಸ್.ಪಿ ಕಾಯ್ದೆ ಜಾರಿಗೆ ತಂದರೂ, ಕಾಯ್ದೆಯ ಕಲಂ 7 ಸಿ ಮತ್ತು ಡಿ ಸೇರಿಸಿ, ಸರಕಾರಕ್ಕೆ ಅಗತ್ಯ ಎನಿಸಿದಾಗ ಈ ಹಣವನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ, ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಕೆಲಸ ಮಾಡಿದ್ದಾರೆ. ಇದೊಂದು ಮಹಾ ವಂಚನೆ. 2013 ರಿಂದ 2025 ರವರೆಗೆ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಸುಮಾರು 2 ಲಕ್ಷ ಕೋಟಿ ರೂಗಳನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿವೆ ಎಂದು ಆರೋಪಿಸಿದರು.

ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಕಾಯ್ದೆ ತರಲು ಹೋರಾಟ ನಡೆಸಿದ ಸಮುದಾಯ ಕಾಯ್ದೆಯ ಕಲಂ 7ಸಿ ಮತ್ತುಡಿ ಗೆ ತಿದ್ದುಪಡಿ ತರಬೇಕೆಂದು ನಿರಂತರ ಹೋರಾಟ ನಡೆಸಿದ್ದರ ಫಲವಾಗಿ ಸರಕಾರ 7 ಡಿ ತಿದ್ದುಪಡಿ ತರಲಾಯಿತೇ ವಿನಃ 7ಸಿಯನ್ನು ಹಾಗೆಯೇ ಉಳಿಸಿಕೊಂಡಿದೆ. ಪರಿಣಾಮ ಪಾವಗಡ ತಾಲೂಕಿನ ಕುಡಿಯುವ ನೀರಿನ ಯೋಜನೆಗೆ 11 ಸಾವಿರ ಕೋಟಿ ರೂ ಬಳಸಲಾಗಿದೆ. ಸರಕಾರದ ಶಕ್ತಿ ಯೋಜನೆಗೆ ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಲಾಗಿದೆ. ಹಾಗಾಗಿ 2026-27ನೇ ಸಾಲಿನ ಬಜೆಟ್ ಮಂಡಿಸುವ ವೇಳೆ ಕಾಯ್ದೆ 7ಸಿ ಗೂ ತಿದ್ದುಪಡಿ ತರಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.

ದಲಿತ ಸಂಘಟನೆಗಳ ಹೋರಾಟಕ್ಕೆ ಮಣಿದು ಸರಕಾರ ಚಳಿಗಾಲದ ಅಧಿವೇಶನದಲ್ಲಿ ಸಾಮಾಜಿಕ ಬಹಿಷ್ಕಾರ ತಡೆ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಮೂರು ವರ್ಷಕ್ಕೆ ಸಿಮೀತಗೊಳಿಸಿದೆ. ಸುಪ್ರಿಂಕೋರ್ಟಿನ ಗೈಡ್‌ಲೈನ್ ಪ್ರಕಾರ ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆ ಇರುವ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲೇಬೇಕೆAದಿಲ್ಲ. ಈ ನಿಯಮದ ಅಡಿಯಲ್ಲಿಯೇ ಅಟ್ರಾಸಿಟಿ ಕೇಸಿನಲ್ಲಿಯೂ ಆರೋಪಿಗಳ ವಿರುದ್ದ ಎಫ್.ಐ.ಆರ್. ಆದ ತಕ್ಷಣ ಬಂಧನವಿಲ್ಲ. ಸಾಮಾಜಿಕ ಬಹಿಷ್ಕಾರ ತಡೆ ಕಾಯ್ದೆಯೂ ಅದೇ ರೀತಿ ಹಲ್ಲುಕಿತ್ತ ಹಾವಿನಂತಾಗುತ್ತದೆ. ಹಾಗಾಗಿ ಶಿಕ್ಷೆಯ ಪ್ರಮಾಣವನ್ನು 3 ವರ್ಷಕ್ಕೆ ಬದಲಾಗಿ 7 ವರ್ಷಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಸರಕಾರ ಈ ವಿಚಾರಗಳ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಂಡು, ಮುಂಬರುವ 2026-27 ರ ಬಜೆಟ್‌ನಲ್ಲಿ ಅನುಷ್ಠಾನಕ್ಕೆ ತರದಿಂದ್ದರೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಮಂತ್ರಿಗಳಿಗೆ ಕಂಡಕAಡಲ್ಲಿ ಘೇರಾವ್ ಹಾಕುವ ಪ್ರತಿರೋಧದ ಪ್ರತಿಭಟನೆಯನ್ನು ದಸಂಸ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಲ್ಲದಮಡು ಕೃಷ್ಣಪ್ಪ, ಜಿಲ್ಲಾಧ್ಯಕ್ಷ ಟೈರ್ ರಂಗನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹನುಮಂತರಾಯಪ್ಪ, ಮಹಿಳಾ ಮುಖಂಡರಾದ ಲಾವಣ್ಯ, ಮಂಡ್ಯ ಮಹಿಳಾ ಮುಖಂಡರಾದ ಸುಶ್ಮಿತ, ಮಧುಗಿರಿ ರವಿಕುಮಾರ್, ವಕೀಲ ಧನಂಜಯ್ಯ ಬ್ಯಾಡರಹಳ್ಳಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular