Monday, September 16, 2024
Google search engine
Homeಮುಖಪುಟಅಪ್ರಾಪ್ತೆಯ ಗರ್ಭಿಣಿ ಪ್ರಕರಣ - ಆರೋಪಿ ಬಂಧನಕ್ಕೆ ಮಹಿಳಾ ಸಂಘಟನೆಗಳ ಆಗ್ರಹ

ಅಪ್ರಾಪ್ತೆಯ ಗರ್ಭಿಣಿ ಪ್ರಕರಣ – ಆರೋಪಿ ಬಂಧನಕ್ಕೆ ಮಹಿಳಾ ಸಂಘಟನೆಗಳ ಆಗ್ರಹ

ತುಮಕೂರಿನಲ್ಲಿ ಮನೆ ಕೆಲಸ ಮಾಡುತ್ತಿದ್ದ ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯ ಆಡಳಿತಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಆರೋಪಿ ಮಲ್ಲಿಕಾರ್ಜುನ ತಲೆ ಮರೆಸಿಕೊಂಡಿದ್ದು ಅವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ.

ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿ ಮಾಡಿರುವ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಬಾಲಕಿಯ ಅತ್ಯಾಚಾರವ್ಯಸಗಿದ್ದು, ಈಗ ಆಕೆ ಏಳುತಿಗಂಗಳ ಗರ್ಭಿಣಿಯಾಗಿದ್ದಾಳೆ, ಸದರಿ ಆರೋಪಿ ಸಮ್ಮ ತಲೆಮರಿಸಿಕೊಂಡಿದಾನೆ ಎಂದು ಹೇಳಿದ್ದಾರೆ.

ಇಂತಹ ಸಂದರ್ಭಗಳಲ್ಲಿ ಸಂತ್ರಶ್ನೆಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಈ ಹಿನ್ನೆಯಲ್ಲಿ ಯಾವುದೇ ಕಾರಣದಿಂದಲೂ ಪ್ರಕರಣ ಮುಚ್ಚಿ ಹೋಗಲು ಅವಕಾಶವಾಗದಂತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ಬಾ.ಹ.ರಮಾಕುಮಾರಿ, ಎಐಎಂಎಂಎಸ್ ನ ಕಲ್ಯಾಣಿ, ಸಮರ್ಥ ಪೌಂಡೇಶನ್ ರಾಣಿ ಚಂದ್ರಶೇಖರ್, ವರದಕ್ಷಿಣೆ ವಿರೋಧಿ ವೇದಿಕೆಯ ಪಾರ್ವತಮ್ಮ, ಗಂಗಲಕ್ಷ್ಮಿ, ಸ್ಲಂ ಜನಾಂದೋಲನದ ಅನುಪಮ, ಅರುಣ್, ಲಲಿತ ಮಲ್ಲಪ್ಪ ಹಾಗೂ ಆಶಾರಾಣಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular