Monday, September 16, 2024
Google search engine
Homeಇತರೆಕೇರಳದಲ್ಲಿ ಆರ್ಥಿಕ ಸಮೃದ್ಧಿಗಾಗಿ ನರಬಲಿ ಕೊಟ್ಟು ನರಮಾಂಸ ಸೇವಿಸಿದ ಆರೋಪಿಗಳು!

ಕೇರಳದಲ್ಲಿ ಆರ್ಥಿಕ ಸಮೃದ್ಧಿಗಾಗಿ ನರಬಲಿ ಕೊಟ್ಟು ನರಮಾಂಸ ಸೇವಿಸಿದ ಆರೋಪಿಗಳು!

ಆರ್ಥಿಕ ಸಮೃದ್ಧಿಗಾಗಿ ನರಬಲಿಯ ಭಾಗವಾಗಿ ಇಬ್ಬರು ಮಹಿಳೆಯರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಬುಧವಾರ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಹತ್ಯೆ ಮಾಡಿದ ಒಬ್ಬನ ಮಾಂಸವನ್ನು ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ.

ರೋಸ್ಲಿ ಮತ್ತು ಪದ್ಮಮ್ ಹತ್ಯೆಗೆ ಸಂಬಂಧಿಸಿದಂತೆ ಹೀಲರ್ ಮತ್ತು ಮಸಾಜ್ ಭಗವಲ್ ಸಿಂಗ್ ಮತ್ತು ಅವರ ಪತ್ನಿ ಲೈಲಾ ಮತ್ತು ರೆಸ್ಟೋರೆಂಟ್ ಮಾಲೀಕ ಮಹಮ್ಮದ್ ಶಫಿ ಅಲಿಯಾಸ್ ರಶೀದ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದರು. ಕೊಚ್ಚಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೂರು ಮಂದಿ ಆರೋಪಿಗಳನ್ನು ಅಕ್ಟೋಬರ್ 26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಆರೋಪಿಗಳು ಮೊದಲ ಬಲಿಪಶು ರೋಸ್ಲಿಯ ಮಾಂಸವನ್ನು ಸೇವಿಸಿದ್ದಾರೆ ಎಂಬ ಮಾಹಿತಿ ನಮಗೆ ಇದೆ. ಆದರೆ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲ. ಪ್ರಕರಣವನ್ನು ನೋಡಿದಾಗ ಅಂತಹ ಘಟನೆಗೆ ಅವಕಾಶವಿದೆ ಮತ್ತು ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ಕೊಚ್ಚಿ ನಗರ ಪೊಲೀಸ್ ಕಮಿಷನರ್ ಸಿ.ಎಚ್.ನಾಗರಾಜ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಜೂನ್ 6ರಂದು ರೋಸ್ಲಿ ಮತ್ತು ಸೆಪ್ಟಂಬರ್ 26ರಂದು ಪದ್ಮಮ್ ನಾಪತ್ತೆಯಾಗುವವರೆಗೂ ಅವರು ಕೊಚ್ಚಿಯ ಕಡಿಮೆ ಬೆಲೆಯ ರೆಸ್ಟೋರೆಂಟ್ ಗೆ ಆಗಾಗ್ಗೆ ಹೋಗುತ್ತಿದ್ದರು. ಮಹಿಳೆಯರು ಎರ್ನಾಕುಲಂನಿಂದ ನಾಪತ್ತೆಯಾದ ನಂತರ 24 ಗಂಟೆಗಳ ಒಳಗೆ ಕೊಲ್ಲಲ್ಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪದ್ಮಮ್ಮನ ಕುಟುಂಬದವರು ನಾಪತ್ತೆಯಾದ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾಗ ಕೊಲೆಗಳು ಬೆಳಕಿಗೆ ಬಂದವು. ಮೂಲತಃ ತಮಿಳುನಾಡಿನ ಧರ್ಮಪುರಿಯವರಾದ ಪದ್ಮಮ್ ಕೊಚ್ಚಿಯಲ್ಲಿ ನೆಲೆಸಿದ್ದರು. ಆಕೆ ನಾಪತ್ತೆಯಾದ ಒಂದು ದಿನದ ನಂತರ ಆಕೆಯ ಕುಟುಂಬದವರು ಸೆಪ್ಟೆಂಬರ್ 27ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಹಿಂದೆ ಡ್ರಗ್ ದಂಧೆ, ಹಲ್ಲೆ ಮತ್ತು ಅತ್ಯಾಚಾರ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಹೆಸರಾಗಿರುವ ಶಫಿಯೊಂದಿಗೆ ಪದ್ಮಮ್ ಸಂಪರ್ಕದಲ್ಲಿದ್ದು, ಕರೆ ದಾಖಲೆಗಳನ್ನು ವಿಶ್ಲೇಷಿಸಿದ ನಂತರ ನರಬಲಿ ಕೊಟ್ಟು ಆರೋಪಿಗಳು ಮಾಂಸ ತಿಂದಿರುವುದು ಬೆಳಕಿಗೆ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular